ಸುರಪುರ: 2023ರ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಾಸಕರಾಗಿ ರಾಜಾ ವೆಂಕಟಪ್ಪ ನಾಯಕ ಅವರು ಗೆಲುವು ಸಾಧಿಸಿದಲ್ಲಿ ರುಕ್ಮಾಪುರ ಗ್ರಾಮದ ಕೊಟ್ಟೂರ ಬಸವೇಶ್ವರ ದೇವಸ್ಥಾನ ದಿಂದ ಕೂಡ್ಲಿಗಿ ತಾಲೂಕಿನ ಕೊಟ್ಟೂರ ಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುವುದಾಗಿ ಹರಕೆ ಹೊತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ರುಕ್ಮಾಪುರ ಗ್ರಾಮ ದಿಂದ ಅನೇಕರು ಪಾದಯಾತ್ರೆ ಆರಂಭಿಸಿದರು.
ಪಾದಯಾತ್ರೆಗೆ ಕಾಂಗ್ರೆಸ್ ಯುವ ಮುಖಂಡ ರಾಜಾ ಸುಷಾಂತ ನಾಯಕ ಭಾಗವಹಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುರೇಶ ಸ್ವಾಮಿ,ಶರಣು ಸ್ವಾಮಿ,ಶಿವು ಸ್ವಾಮಿ,ಸೋಮಶೇಖರ ಗೋಗಿ,ಹಣಮಗೌಡ ದಳಪತಿ,ರವಿ ಬಡಗ,ಹಣಮಂತ್ರಾಯ ಮಾಲಿ ಪಾಟೀಲ,ಮಾನಪ್ಪ ಬೂದಿಹಾಳ ಇದ್ದರು.
ರಾಜಾ ವೆಂಕಟಪ್ಪ ನಾಯಕ ಅಭಿಮಾನಿಗಳಾದ ಭಾಗನಾಥ ಗುತ್ತೇದಾರ,ಪ್ರಭು ಕೊಳ್ಳಿ,ಶಿವು ಕುಂಬಾರ,ಶಿವನಗೌಡ ನವಿಲಗುಡ್ಡ ಹಾಗೂ ವಿರೇಶ ಚಿಲ್ಲಾಳ ಪಾದಯಾತ್ರೆ ಆರಂಭಿಸಿದರು.