ಕಲಬುರಗಿ ಶ್ರೀ ಶರಣಬಸವೇಶ್ವರ ಅಂಗಳದಲ್ಲಿ ಭಕ್ತ ಸಾಗರ

0
12

ಕಲಬುರಗಿ: ಜಗತ್ ಬಡಾವಣೆಯಲ್ಲಿರುವ ಗೋಮುಖ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ 31ರಂದು ಪೂರ್ವಾರಾಧನೆ ನಿಮಿತ್ಯ ಬೆಳಿಗ್ಗೆ 7 ರಿಂದ 9ರ ವರೆಗೆ ವಿಷ್ಣು ಸಹಸ್ರನಾಮ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭೀಷೇಕ ಹಾಗೂ ಶ್ರೀ ಗುರುಗಳಿಗೆ ವಿಶೇಷ ಪೂಜೆ. ಸಾಯಂಕಾಲ 7 ರಿಂದ 9ರ ವರೆಗೆ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿಯಿಂದ ಭಜನೆ ನಂತರ ಮಹಾಮಂಗಳಾರುತಿ ಜರುಗಲಿದೆ.

ಅಲ್ಲದೇ ಪಂ. ವಿಷ್ಣುದಾಸಾಚಾರ್ಯರಿಂದ ಪ್ರವಚನ ಜರುಗಲಿದದು, ಮುಖ್ಯ ಅತಿಥಿಗಳಾಗಿ ಖ್ಯಾತ ನೇತ್ರ ತಜ್ಞರಾದ ಡಾ. ಉದಯ ಪಾಟೀಲ ಮತ್ತು ಖ್ಯಾತ ಮುಖರೋಗ ಚಿಕಿತ್ಸಾ ತಜ್ಞರಾದ ಡಾ. ಉಡುಪಿಕೃಷ್ಣ ಜೋಷಿ ಅವರುಗಳು ಆಗಮಿಸಲಿದ್ದಾರೆ.

Contact Your\'s Advertisement; 9902492681

ಮಧ್ಯಾರಾಧನೆ ಸೆಪ್ಟಂಬರ್ 1ರಂದು ಬೆಳಿಗ್ಗೆ 8 ರಿಂದ 9ರ ವರೆಗೆ ಶ್ರೀ ಪೂರ್ಣ ಪ್ರಜ್ಞ ಪಾರಾಯಣ ಸಂಘದಿಂದ ಅಷ್ಟೋತ್ತರ, 9 ರಿಂದ 10.30ರ ವರೆಗೆ ಶ್ರೀ ಗುರುಸಾರ್ವಭೌಮರ ಉತ್ಸವ ಮೂರ್ತಿಯ ಪಲ್ಲಕ್ಕಿಯ ಗ್ರಾಮ ಪ್ರದಕ್ಷಿಣೆ. ನಡೆಯಲಿದೆ.

ಮುಂಜಾನೆ 11 ಗಂಟೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ವೇದಶಾಸ್ತ್ರ ಪಂಡಿತರಾದ ಶ್ರೀ ಗೋಪಾಲಾಚಾರ್ಯ ಅಕಮಂಚಿ ಅವರು ಪ್ರವಚನ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಅಲ್ಲಮ ಪ್ರಭು ಪಾಟೀಲ, ಜ್ಞಾನಪೂರ್ಣ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕರು ಹಾಗೂ ಸಮಜಾ ಸೇವಕಿ ಕು. ಪೂರ್ಣಿಮಾ ಬಾರಿಮನಿ, ಆಕಾಶವಾಣಿ ಕಲಾವಿದರು ಹಾಗೂ ಸಾಹಿಗಳಾದ ಶ್ರೀಮತಿ ಸೀತಾ ಮಲ್ಲಾಬಾದಿ ಮತ್ತು ಮಹಾನಗರಪಾಲಿಕೆ ಸದಸ್ಯರಾದ ವಿಶಾಲ ನವರಂಗ ಅವರುಗಳು ಆಗಮಿಸಲಿದ್ದಾರೆ.

ಸಪ್ಟಂಬರ್ 2ರಂದು ಉತ್ತರಾಧನೆ ನಿಮಿತ್ಯ ಕೂಡ ದೈನಂದಿನ ಭಕ್ತಿಪೂರ್ವ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಪಂಡಿತ ಶ್ರೀನಿವಾಸಾಚಾರ್ಯ ಪದಕಿ ಅವರಿಂದ ಪ್ರವಚನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷರಾದ ರವಿ ಲಾತೂರಕರ್, ಸಮಾಜ ಸೇವಕರಾದ ವೆಂಕಟೇಶ ಅಡಕಿ ಅವರುಗಳು ಆಗಮಿಸಲಿದ್ದಾರೆ ಎಂದು ಶ್ರೀ ಗುರುರಾಜ ಸೇವಾ ಸಮಿತಿಯು ತಿಳಿಸಿದ್ದು, ಭಕ್ತಾದಿಗಳು ಈ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಭಕ್ತಿ ಕಾರ್ಯಕ್ರಮಗಳಿಗೆ ಆಗಮಿಸಿ, ಶ್ರೀ ಗುರುರಾಯರ ಸೇವೆ ಮಾಡಿ ಪುನೀತರಾಗಬೇಕೆಂದು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here