ಸ್ಲಮ್ ಬೋರ್ಡ್ ಮನೆಗಳ ನಿರ್ಮಾಣ ಸ್ಥಳಕ್ಕೆ ಶಾಸಕ ಆರ್.ವಿ.ಎನ್ ಭೇಟಿ

0
16

ಸುರಪುರ: ನಗರದ ವೆಂಕಟಾಪುರ ಮತ್ತು ಸತ್ಯಂಪೇಟ ಕ್ರಾಸ್ ಬಳಿಯಲ್ಲಿ ಕೊಳಗೇರಿ ಅಭಿವೃಧ್ಧಿ ನಿಗಮದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರೀಶಿಲಿಸಿದರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ನಿರ್ಮಿಸಿ ಮತ್ತು ಕ್ರಿಯಾ ಯೋಜನೆಯಂತೆ ನಿಗದಿತ ಸಮಯದಲ್ಲಿ ಪುರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು. ಹಾಗೂ ಕಾಮಗಾರಿಯ ಗುಣಮಟ್ಟವನ್ನು ಅಧಿಕಾರಿಗಳು ಆಗಾಗ ಪರಿಶೀಲಿಸಿ ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಯಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ವೆಂಕೋಬ ಯಾದವ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ರವಿಸಾಹುಕಾರ ಆಲ್ದಾಳ, ಧರ್ಮಣ್ಣ ಮಡಿವಾಳ, ಶಕೀಲ್ ಅಹ್ಮದ್ ಖುರೇಶಿ, ನಗರಸಭೆ ಸದಸ್ಯರಾದÀ, ಜುಮ್ಮಣ್ಣ ಕೆಂಗೂರಿ, ಖಮರುದ್ದೀನ್, ಅಹಮದ್ ಶರೀಪ್, ಮೆಹಬೂಬ್ ಸಾಬ್, ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ಖಯೋಮ್, ಸಹಾಯಕ ಕಾರ್ಯಪಾಲಕ ದೇವೇಂದ್ರ ಕುಮಾರ್, ಜೂನಿಯರ್ ಅಭಿಯಂತರ ರಾಮಾಂಜನೇಯ ರೆಡ್ಡಿ, ಸಹಾಯಕ ಅಭಿಯಂತರ ನಿತೇಶ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here