ಕಲಬುರಗಿ: ಕೆಸಿಟಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನಿಯುಕ್ತರಾಗಿರುವ ಮೊಹಮ್ಮದ್ ಯುಸೂಫ್ ಹುಸೈನಿ ಮತ್ತು ಕಾಲೇಜಿನ ಕಾರ್ಯದರ್ಶಿ ಮೊಹಮ್ಮದ್ ಯುಸೂಫ್ ಅವರಿಗೆ ಡಾ. ರಫೀಕ್ ಕಮಲಾಪುರಿ ತಂಡದಿಂದ ಸನ್ಮಾನಿಸಲಾಯಿತು.
ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ಡಾ. ರಫೀಕ್ ಕಮಲಾಪುರಿ, ಮಕ್ಬುಲ್ ಅಹ್ಮದ್ ನಾಯ್ಯಾರ ಶಾಬ್ದಿ, ಹಕೀಮ್ ಸೈಯದ್ ಬಾರೆ, ನಿವೃತ್ತ ಮುಖ್ಯಗುರುಗಳಾದ ಮೊಹಮ್ಮದ್ ಯುಸೂಫ್, ಮೊಹಮ್ಮದ್ ಖುದ್ದುಸ್, ನಜೀರ್ ಉಸ್ತಾದ್ ತಿಮ್ಮಾಪುರಿ, ಅಫಜಲ್ ಮೊಹಮ್ಮದ್ ಸೇರಿದಂತೆ ಮುಂತಾದವರು ಸನ್ಮಾನಿಸಿ ಶುಭಾಶಯ ತಿಳಿಸಿದ್ದರು.