ದರ್ಗಾ ಹಜರತ್ ಸಾತೋ ಶಹೀದ್ ಉರುಸ್ ಯಶಸ್ವಿ

0
34

ಕಲಬುರಗಿ: ನಗರದ ಹೊರವಲಯದ ಸೈಯದ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ದರ್ಗಾದ ವಂಶಪರಂಪರೆ ಮೂತವಲ್ಲಿ ಹಾಗೂ ಸಜ್ಜಾದ ನಶೀನ್ ಅಶ್ವಕ್ ಅಹ್ಮದ ಸಿದ್ದಿಖಿ ಅವರು ಸಂದಲ್ (ಗಂಧ), ಚಿರಾಗಾನ (ದೀಪ) ಮತ್ತು ಜಿಯಾರಾತ್ ಅಕ್ಟೋಬರ್.1 ರಿಂದ 3 ರ ವರೆಗೆ ಮುತಾವಲಿಯ್ಯರ ನೇತೃತ್ವದಲ್ಲಿ ನೇರವೇರಿಸಿ ಗ್ರಾಮದ ಎಲ್ಲಾ ಭಕ್ತಾದಿಗಳಿಗೆ ಆರ್ಶಿವಚನ ನೀಡಿದರು.

Contact Your\'s Advertisement; 9902492681

ಆಲ್ ಇಂಡಿಯಾ ಹಿಂದಿ ಸಭಾಮಂಚದ ಅಧ್ಯಕ್ಷ ಸೈಯದ್ ರೌಫ್ ಖಾಧರಿ ಸಾಹೇಬ್ ಇವರಿಗೆ ಮುತಾವಲಿರವರಿಂದ ಹೂವಿನಹಾರ ಹಾಕಿ ಸನ್ಮಾನಿಸಿ ಅವರು ಮಾತನಾಡುತ್ತಾ ಹಿಂದು ಮುಸ್ಲಿಂ, ಶಿಕ್, ಕ್ರೈಸ್ತ ಎಲ್ಲಾ ಜಾತಿ ಜನಾಂಗದವರು ಸಹೋದರರಿದ್ದಂತೆ ಇಲ್ಲಿ ಯಾವುದೇ ಮತ ಬೇದ ಭಾವ ಇಲ್ಲದೆ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ಸಹಕಾರ ದಿಂದ ಬಾಳುತ್ತಾ, ದರ್ಶನ ಪಡೆದು ಆಶಿರ್ವಾದ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.

ಹಾಫಿಜ ಉ ಇಮಾಮ ಫಾರುಕ ಬರಕಾತಿ, ಸೈಯದ್ ನಿಜಾಮ್ ಹುಸೇನಿ ಬಿರಾದರ ಸಜ್ಜಾದ ನಶಿನ್ ಗೋಗಿ ದರ್ಗಾ, ಮೈಹಿಮುದ್ ಶಾ, ಮಹ್ಮದ್ ಮುನಿರ್, ಶರಣು, ಮಹ್ಮದ್ ಅಕ್ಬರ್, ಡಾ.ಮಹ್ಮದ್ ಹಾಮಿದ್ ಅಲಿ ಕಲಬುರರ್ಗಿ, ಇವರನ್ನು ಮುತವಲಿ ಅವರಿಂದ ಸನ್ಮಾನಿಸಲಾಯಿತು.

ಮುತಾವಲಿರವರ ಸಹೋದರರಾದ ಅಬ್ದುಲ ಮಜೀದ್, ಅಬ್ದುಲ ರಫೀಕ್, ಅಬ್ದುಲ ಸತ್ತಾರ, ಅಬ್ದುಲ ಖಾದರ ಇಂಜಿನಿಯರ, ಅಬ್ದುಲ ಜಬ್ಬಾರ, ಮುಸ್ತಾಕ, ಗೌಸ ಖಾದಿಮ್, ಫಾರೂಕ, ಹಾಜಿ, ಬಾಬು, ಲಾಲ ಅವರು ಪ್ರೋತ್ಸಾಹಿಸಿದರು.

ಈ ಕಾರ್ಯಕ್ರಮದಲ್ಲಿ ಮುತಾವಲಿಯರು ಪೋಲಿಸ್ ಇನ್ಸೆಕ್ಟರ್ ಹಾಗೂ ಪೋಲಿಸ್ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು ಅವರಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಜನಾಂಗದವರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here