ಪದವೀಧರರ ಕ್ಷೇತ್ರದ ಚುನಾವಣೆ: ಪದವೀಧರರು ಹೆಸರು ನೋಂದಾಯಿಸಲಿ

0
24

ಶಹಾಬಾದ: ಪದವೀಧರರ ಕ್ಷೇತ್ರದ ಚುನಾವಣೆಯ ನಿಮಿತ್ತ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಹಕರಿಸಬೇಕು ಎಂದು ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.

ಅವರು ಗುರುವಾರ ನಗರದ ತಹಸೀಲ್ದಾರ ಕಚೇರಿಯಲ್ಲಿ ಪದವೀಧರರ ಕ್ಷೇತ್ರದ ಚುನಾವಣೆ ನಿಮಿತ್ತ ಪದವೀಧರರು ಹೆಸರು ನೋಂದಾಯಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಕರೆದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ತಹಸೀಲ್ ಕಚೇರಿಯಲ್ಲಿ ಈಗಾಗಲೇ ಕೌಂಟರ್ ತೆರೆಯಲಾಗಿದೆ. ಉಚಿತವಾಗಿ ನಮೂನೆ 18 ಫಾರ್ಮ ಪಡೆದು ಆಧಾರ ಕಾರ್ಡ, ವೋಟರ್ ಕಾರ್ಡ, ಎಸ್‍ಎಸ್‍ಎಲ್‍ಸಿ ಮತ್ತು ಮೂರು ವರ್ಷದ ಪದವಿ ಅಂಕಪಟ್ಟಿ ಹಾಗೂ ಒಂದು ಭಾವಚಿತ್ರ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಈ ಹಿಂದೆ ಮತ ಚಲಾಯಿಸಿದವರೂ ಇದೀಗ ಮರು ಅರ್ಜಿ ಸಲ್ಲಿಸಬೇಕು. ನೊಂದಣಿ ಮಾಡಿಕೊಳ್ಳಲು ನವೆಂಬರ್ 6 ಕೊನೆಯ ದಿನಾಂಕವಿದ್ದು,ಆದಷ್ಟು ಬೇಗನೆ ಪದವಿ ಹೊಂದಿದದವರು ನೊಂದಣಿ ಮಾಡಿಕೊಳ್ಳಬೇಕು. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಪಡೆದು ರಾಜಕೀಯ ಮುಖಂಡರು ನೋಂದಣಿಗೆ ಮುಂದಾಗಬೇಕು. ಇದಕ್ಕೆ ಎಲ್ಲರ ಸಸಹಕಾರ ಅಗತ್ಯ ಎಂದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಬಿಎಸ್‍ಪಿಯ ಶೇಖ ಬಾಬು ಉಸ್ಮಾನ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here