ಕಲಬುರಗಿ: ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ಶ್ರೀ ವಾಲ್ಮೀಕಿ ಮಹರ್ಷಿ ಅವರ ಜಯಂತಿಯ ನಿಮಿತ್ಯ ನಗರದ ಸರದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ರಂಗ ಮಂದಿರದವರೆಗೆ ಹಮ್ಮಿಕೊಂಡಿರುವ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಚಾಲನೆ ನೀಡಿದರು.
ಸಿಇಓ ಭಂವಾರ್ಸಿಂಗ್ ಮೀನಾ, ಎಸ್ಪಿ ಅಡೂರು ಶ್ರೀನಿವಾಸಲು ಮತ್ತು ನಂದಕುಮಾರ ಮಾಲಿಪಾಟೀಲ, ಚನ್ನಪ್ಪ ಸೂರಪೂರಕರ್, ಶರಣು ಸುಬೇದಾರ, ಶ್ರವಣಕುಮಾರ ನಾಯಕ, ನಂದಕುಮಾರ ನಾಯಕ ಸೇರಿದಂತೆ ಮತ್ತಿತರರಿದ್ದರು.