ಬಾಬಾ ಸಾಹೇಬರ ರಥ ಮುಂದೆ ಸಾಗಲಿ: ಕೆ ನೀಲಾ

0
62

ಜೇವರ್ಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವುದರ ಮೂಲಕ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಾಹಿತಿ ಕೆ. ನೀಲಾ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜೇವರ್ಗಿ ಮತ್ತು ಯಡ್ರಾಮಿ ತಾಲೂಕಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಸಂವಿಧಾನದ ರಕ್ಷಣೆ ಭಾರತದ ಐಕ್ಯತೆ” ದಿ. ಶಾಂತಪ್ಪ ಕಟ್ಟಿಮನಿ ಮುದೋಳ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಸಂವಿಧಾನ ಜಾರಿಗೆ ಬಂದ ಮೇಲೆ ಮಹಿಳೆಯರಿಗೆ ಎಲ್ಲ ಅವಕಾಶಗಳು ಸಿಗುತ್ತಿವೆ. ಅವಕಾಶವಾದಿ ಜನರು ಸಂವಿಧಾನ ಪೂರ್ಣವಾಗಿ ಜಾರಿಗೆ ಬರಲು ಬಿಡುತ್ತಿಲ್ಲ. ದೇಶದ ಜನರು ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಮಾಡಬೇಕು.

ನಂತರ ಮಾತನಾಡಿದ ಉಪನ್ಯಾಸಕ ನಿಜಲಿಂಗ ದೊಡ್ಮನಿ ಸಂವಿಧಾನದ ಜಾಗ್ರತಿ ಕಾರ್ಯಕ್ರಮಗಳು ನಿತ್ಯ ಜರುಗಬೇಕು. ಸರ್ವ ಜನರಿಗೆ ಶಾಂತಿಯ ತೋಟ ನಿರ್ಮಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ. ದೇಶದ ಎಲ್ಲ ವರ್ಗದ ಮಹಿಳೆಯರು ಸೇರಿ ದಮನಿತರಿಗೆ ಬದುಕುವ ಹಕ್ಕು ನೀಡಿದ್ದಾರೆ. ವಿಶ್ವದ ಎಲ್ಲ ಸಂವಿಧಾನ ಓದಿಕೊಂಡ ಬಾಬಾ ಸಾಹೇಬರು ಸಮರ್ಥವಾದ ಗ್ರಂಥ ನೀಡಿದ್ದಾರೆ ಎಂದರು.

ದಸಂಸ ರಾಜ್ಯ ಅಧ್ಯಕ್ಷ ಅರ್ಜುನ ಭದ್ರೆ ಮಾತನಾಡಿ ಡಾ.ಅಂಬೇಡ್ಕರ್ ಅವರು ದೇಶದ ಜ್ಞಾನದ ಜ್ಯೋತಿಯಾಗಿದ್ದಾರೆ. ಎಲ್ಲರಿಗೂ ಧ್ವನಿಯಾದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ವಹಿಸಿದ್ಡರು. ಮಹೇಶ ಕೋಕಿಲೆ ಕಾರ್ಯಕ್ರಮ ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಕ್ರಾಂತಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಕಾಶೀಮ ಪಟೇಲ ಮುದೋಳˌ ಶಿವಶರಣಪ್ಪ ಕೋಬಾಳˌ ಶರಣಬಸವ ಕಲ್ಲಾ, ಮಲ್ಲಿಕಾರ್ಜುನ ಪೂಜಾರಿ, ಶಿವಕಾಂತಮ್ಮ ದಿ. ಶಾಂತಪ್ಪ ಕಟ್ಟಿಮನಿˌ ಗುರಣ್ಣ ಕಾಚಾಪುರˌ ಶಾಂತಪ್ಪ ಯಲಗೋಡ, ಪುಂಡಲೀಕ ಗಾಯಕವಾಡ, ಭೀಮರಾಯ ನಗನೂರˌ ದವಲಪ್ಪ ಮದನ್‌ˌ ಮಲ್ಲಿಕಾರ್ಜುನ ಕೆಲ್ಲೂರˌ ಸಿದ್ರಾಮ ಕಟ್ಟಿˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿˌ ಶ್ರೀಮಂತ ಧನ್ನಕರ್ˌ ಶಿಕ್ಷಕ ಗಂಗಪ್ಪ ಬಳಗಾನೂರˌ ಮಲ್ಲಮ್ಮ ಕೊಂಬಿನ್ˌ ಸೇರಿದಂತೆ ಹಲವರು ಉಪಸ್ಥಿತರಿರುವರು.

ಇದೇ ವೇಳೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ದಂಪತಿಗಳಾದ ಡಾ. ಮಹಾಲಿಂಗಪ್ಪ ಬಿ. ಮಂಗಳೂರುˌ ಡಾ. ಸೌಭಾಗ್ಯ ಎಂ. ಮಂಗಳೂರು ದಂಪತಿಗಳನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here