ಕಲಬುರಗಿ: ನಗರದ ಕನ್ನಡ ಭವನದಲ್ಲಿ ಹೈದ್ರಾಬಾದ ಕಲ್ಯಾಣ ಕರ್ನಾಟಕ ಸಂಗೀತ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹಿಂದುಸ್ತಾನಿ ಸಂಗೀತೋತ್ಸವದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಸಿದ್ರಾಮಪ್ಪ ಪೊಲೀಸ್ ಪಾಟೀಲ್ ಕುಕನೂರ, ರೇವಯ್ಯ ವಸ್ತ್ರದಮಠ, ಶಿವಶಂಕರ ಬಿರಾದಾರ, ಎಂ.ಎಸ್.ಪೊಲೀಸ್ಪಾಟೀಲ್ ಸೇರಿ ಹಲವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಳಂದನ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ನರೋಣಾದ ಶ್ರೀ ಚನ್ನಮಲ್ಲ ಸ್ವಾಮೀಜಿ, ಉದ್ಯಮಿ ಅಂಬಯ್ಯ ಗುತ್ತೇದಾರ್, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪ್ರಮುಖರಾದ ಮಹೇಶ ಹೂಗಾರ, ಸಿ.ಬಿ.ಪಾಟೀಲ್, ವಸಂತ ಫುಲ್ದಾರಿ, ಪ್ರಾಶುಪಾಲ ಶರಣು ರಾಮಗೋಳ, ಹೈದ್ರಾಬಾದ ಕಲ್ಯಾಣ ಕರ್ನಾಟಕ ಸಂಗೀತ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ಹೂಗಾರ, ಆಯೋಜಕ ಶಂಕರ ದೇಸಾಯಿಕಲ್ಲೂರ, ಇತರರಿದ್ದರು.