- ಕೊಟ್ರೇಶ್.ವೈ
ವಿಜಯನಗರ: ಹಗರಿಬೊಮ್ಮನಹಳ್ಳಿ ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ನಿಮಿತ್ತ ದಲಿತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಅಂಬೇಡ್ಕರ್ ಪ್ರತಿಮೆಗೆ ಜ್ಯೋತಿ ಹತ್ತಿಸುವುದರ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಮೆಟ್ರಿಕ್ ನಂತರ ವಸತಿ ನಿಲಯದ ವಿದ್ಯಾರ್ಥಿನಿಯರು ವಾರ್ಡನ್ ಗೀತಾ ಮೇಡಂ, ಹಾಗೂ ಪರಿಷತ್ತಿನ ಅಧ್ಯಕ್ಷರಾದ ಬಿ.ಬಿ.ಜಿ ಗೌತಮ್, ಚಲವಾದಿ ಮಹಾಸಭಾ ತಾಲೂಕ ಅಧ್ಯಕ್ಷರಾದ ಕಾಳಿ ಬಸವರಾಜ್, ಬಿಸಿಊಟದ ಸಂಯೋಜಕರಾದ ರವಿ ನಾಯಕ, ಮಹೇಶ್ ಮಾದೂರು, ಶಿಕ್ಷಕರಾದ ಎಂ ರಾಜು, ಮಂಜುನಾಥ್ ಎಂ.ಎಸ್, ಹುಸೇನ್ ಸಾಬ್, ಚಂದ್ರಪ್ಪ, ಬಿ ಕೊಟ್ರಪ್ಪ, ಗೋಪಿ ನಾಯಕ್, ಶಿಕ್ಷಕಿಯಾದ ಹನುಮಕ್ಕ ಸಿ, ವಕೀಲರಾದ ಕೊಟ್ರೇಶ್ ಹಾಗೂ ವಿವಿಧ ಮುಖಂಡರು ಹಾಜರಿದ್ದರು.