ಸುರಪುರ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ ಹಾಗೂ ಬೀದರ್ ಕೊಪ್ಪಳ ಬಾಗಲಕೋಟೆಯಲ್ಲಿ ನಡೆಯಲಿರುವ ಮಾದಿಗರ ಆತ್ಮಗೌರವ ಸಮಾವೇಶದ ಪೂರ್ವ ಭಾವಿ ಸಭೆ ನಡೆಸಲಾಗಿದೆ.
ಈ ಪೂರ್ವ ಭಾವಿ ಸಭೆಯು ಬಿಜೆಪಿ ಎಸ್ ಸಿ ಮೋರ್ಚಾ ಯಾದಗಿರಿ ಜಿಲ್ಲಾಧ್ಯಕ್ಷರಾದ ಭೀಮಾಶಂಕರ ಬಿಲ್ಲವ ಅವರ ನೇತೃತ್ವದಲ್ಲಿ ನಡೆಯಿತು ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ನಮ್ಮ ಮಾದಿಗ ಸಮಾಜವು ಒಗ್ಗಟ್ಟಿನಿಂದ ನಮ್ಮ ಸಮುದಾಯದ ಏಳಿಗೆಗಾಗಿ ಕೆಲಸ ಮಾಡಬೇಕು, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಎಲ್ಲೆಡೆ ಹೋರಾಟಗಳು ನಡೆಯಲಿವೆ ಎಂದರು ಹಾಗೂ ಬೀದರ್ ಕೊಪ್ಪಳ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯಲಿರುವ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿ ನಮ್ಮ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಎಲ್ಲಾ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನಪ್ಪ ವಾಗಣಗೇರಾ, ಮಲ್ಲಿಕಾರ್ಜುನ ಮಂದಲೆ ಕುಂಭಾರಪೇಟ್, ಬಾಬು ವಾಗಣಗೇರಾ,ರಾಮಣ್ಣ ಬಿಲ್ಲವ ದೇವಿಕೇರಾ, ತಿಮ್ಮಣ್ಣ ಬಿಲ್ಲವ ದೇವಿಕೇರಾ, ಬಸಪ್ಪ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಭೀಮಣ್ಣ ಗಾಳೆನೂರ್,ಚಂದ್ರಮ ಕಟ್ಟಿಮನಿ ದಿವಳಗುಡ್ಡ,ರಾಮು ಪಾಳದಕೇರಿ, ಭೀಮಣ್ಣ ಅಡ್ಡೊಡಗಿ, ನಿಂಗಪ್ಪ ಬಿಲ್ಲವ ದೇವಿಕೇರಾ, ಸುಭಾಷ್ ಮಾರಲಭಾವಿ, ಹಣಮಂತ ಬಿಲ್ಲವ ದೇವಿಕೇರಾ,ಜಟ್ಟೆಪ್ಫ ಕಟ್ಟಿಮನಿ,ಶಿವಪ್ಪ ಅಡ್ಡೊಡಗಿ,ಅಮನ ಬಿಲ್ಲವ,ದೇವು ಬಿಲ್ಲವ, ಶಿವರಾಜ ಬಿಲ್ಲವ,ಮಲ್ಲು ವಾಗಣಗೇರಾ, ಭೀಮಾಶಂಕರ ವಾಗಣಗೇರಾ ಇದ್ದರು.