ದ್ವಿಚಕ್ರವಾಹನ ಮುಗುಚಿ ಬಿದ್ದು ಸವಾರನ ಸಾವು

0
113

ಕಲಬುರಗಿ: ಚಲಿಸುತ್ತಿದ್ದ ದ್ವಿಚಕ್ರವಾಹನವೊಂದು ಮುಗುಚಿ ಬಿದ್ದ ಪರಿಣಾಮ ಸವಾರನು ಅಸುನೀಗಿದ ಘಟನೆ ಸೇಡಂ ರಸ್ತೆಯಲ್ಲಿರುವ ಮದಿಹಾಳ್ ತಾಂಡಾ ಕ್ರಾಸ್ ಹತ್ತಿರ ಸಂಭವಿಸಿದೆ.

ಮೃತನಿಗೆ ಖಾಸಗಿ ಕಂಪೆನಿಯೊಂದರ ಹಿರಿಯ ಮಾರಾಟ ಕಾರ್ಯನಿರ್ವಾಹಕ ರಾಘವೇಂದ್ರ ಕುಲಕರ್ಣಿ ಎಂದು ಗುರುತಿಸಲಾಗಿದೆ.

Contact Your\'s Advertisement; 9902492681

ಮೃತ ವ್ಯಕ್ತಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪಟ್ಟಣದ ನಿವಾಸಿ ಎಂದು ಹೇಳಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸಂಚಾರಿ ಪೋಲಿಸ್ ಠಾಣೆಯ ಪಿಐ ಶಾಂತಿನಾಥ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here