ಮಾನವ ಬಂಡವಾಳ ನಿರ್ಮಾಣಕ್ಕೆ ವಲಸೆಗೆ ಪ್ರೋತ್ಸಾಹ ಅಗತ್ಯ

0
40

ಶಹಾಬಾದ: ನಮ್ಮ ದೇಶದಲ್ಲಿ ಜನಸಂಖ್ಯೆಯ ಹಂಚಿಕೆಯ ಪ್ರಮಾಣವನ್ನು ಗಮನಿಸಿದಾದ ಸಮ ಪ್ರಮಾಣದಲ್ಲಿ ಹಂಚಿಕೆಯಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಜನಸಂಖ್ಯೆ ಕಂಡುಬರುತ್ತದೆ. ಎಲ್ಲಾ ಜನರು ಒಂದೆಡೆ ನೆಲೆಸುವದರಿಂದ ಅಲ್ಲಿ ಉದ್ಯೋಗಗಳ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ನಿರುದ್ಯೋಗದ ಪ್ರಮಾಣ ಕಡಿಮೆಯಾಗಿ, ಮಾನವ ಬಂಡವಾಳ ನಿರ್ಮಾಣವಾಗಲು ವಲಸೆಗೆ ಪ್ರೋತ್ಸಾಹ ನೀಡಬೇಕು ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಸಮೀಪದ ಝಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ವಲಸೆ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಜನರು ಉದ್ಯೋಗ ಮತ್ತು ಹೆಚ್ಚಿನ ವೇತನಗಳನ್ನು ಅರಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಎಂಜಿನಿಯರರು, ವೈದ್ಯರು, ವ್ಯವಸ್ಥಾಪಕರಂತಹ ತಾಂತ್ರಿಕ ಅರ್ಹತೆಯುಳ್ಳ ವ್ಯಕ್ತಿಗಳು ಹೆಚ್ಚಿನ ವೇತನ ಪಡೆಯುವುದಕ್ಕಾಗಿ ಇತೆರ ದೇಶಗಳಿಗೆ ವಲಸೆ ಹೋಗುತ್ತಾರೆ. ಆಂತರಿಕ ಮತ್ತು ಬಾಹ್ಯ ವಲಸೆಗಳೆರಡೂ ಸಾರಿಗೆ ವೆಚ್ಚ, ವಲಸೆ ಹೋದ ಪ್ರದೇಶಳಲ್ಲಿನ ಅಧಿಕ ಜೀವನವೆಚ್ಚ ಮತ್ತು ಅಪರಿಚಿ ಸಾಮಾಜಿಕ-ಸಾಂಸ್ಕøತಿಕ ಸನ್ನಿವೇಶಗಳಲ್ಲಿ ಬದುಕುವ ಮಾನಸಿಕ ವೆಚ್ಚಗಳನ್ನು ಒಳಗೊಂಡಿದೆ. ಹೊಸ ಸ್ಥಳಗಳಲ್ಲಿನ ಅಧಿಕಗೊಂಡ ಗಳಿಕೆಯು ವಲಸೆಯ ವೆಚ್ಚಗಳಿಗಿಂತ ಹೆಚ್ಚಾಗಿರುತ್ತದೆ. ಆದುದರಿಂದ ವಲಸೆ ಮೇಲಿನ ವೆಚ್ಚ ಸಹ ಮಾನವ ಬಂಡವಾಳ ನಿರ್ಮಾಣದ ಮೂಲವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ನಾಗನಗೌಡ ಪಾಟೀಲ ವೈಜಾಪುರ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಸುರೇಶ ಮಾಂಗ್, ಶಿಕ್ಷಕರಾದ ಶಾರದಬಾಯಿ, ಶಾಂತಾಬಾಯಿ, ವೀರವ್ವ ಹಿರೆಕೆನ್ನೂರ್, ಮಂಜುಳಾ ಮೇಲಿನಮನಿ, ಗ್ರಾಮಸ್ಥ ಕೃಷ್ಣ ನಾಯ್ಕೊಡಿ ಹಾಗೂ ಗ್ರಾಮಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here