ಮಹಿಪಾಲರೆಡ್ಡಿ ರಚಿತ `ಚಂದ್ರಶಿಕಾರಿ’ಗೆ ಗುಲ್ಬರ್ಗ ವಿವಿ ಗರಿ

0
137

ಸೇಡಂ, ಡಿ.31; ಗುಲಬರ್ಗಾ ವಿಶ್ವವಿದ್ಯಾಲಯದ ಕೊಡಮಾಡುವ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಅವರು ಬರೆದ `ಚಂದ್ರಶಿಕಾರಿ’ ಪುಸ್ತಕವು ಆಯ್ಕೆಯಾಗಿದೆ.

ಗುಲ್ಬರ್ಗ ವಿವಿ ವ್ಯಾಪ್ತಿಗೆ ಬರುವ ಲೇಖಕರಿಗೆ, ಕಲಾವಿದರಿಗೆ ಕಥೆಗಾರರಿಗೆ ಕೊಡಮಾಡುವ 2022ನೇ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ `ಜೀವನ ಕಥನ’ ವಿಭಾಗದಲ್ಲಿ `ಚಂದ್ರಶಿಕಾರಿ’ ಎಂಬ ಗ್ರಂಥದ ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಆಯ್ಕೆಯಾಗಿದ್ದಾರೆ.

Contact Your\'s Advertisement; 9902492681

ಈ ಪ್ರಶಸ್ತಿಯು 5000 ರೂ. ಗೌರವಧನ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಜನೆವರಿ ತಿಂಗಳಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕುಲಪತಿಗಳಾದ ಪೆÇ್ರ. ದಯಾನಂದ ಅಗಸರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಕನ್ನಡ ಅಧ್ಯಯನ ಸಂಸ್ಥೆಯ ಪ್ರಸಾರಾಂಗ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here