ಶಹಾಬಾದ್ ಮೂರು ರೈಲುಗಳ ನಿಲುಗಡೆಗೆ ಸಂಸದ ಡಾ. ಉಮೇಶ್ ಜಾಧವ್ ಹಸಿರು ನಿಶಾನೆ

0
80

ಶಹಾಬಾದ: ಕೋವಿಡ್ ಸಂದರ್ಭದಲ್ಲಿ ಶಹಾಬಾದ ನಿಲ್ದಾಣದಲ್ಲಿ ಕೆಲವು ರೈಲುಗಳು ನಿಲ್ಲುತ್ತಿರಲಿಲ್ಲ.ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ತಲೆದೋರಿತ್ತು.ಸಾರ್ವಜನಿಕರ ಹಿತದೃಷ್ಟಿಯಿಂದ ಮೂರು ರೈಲುಗಳನ್ನು ನಿಲ್ಲಿಸಲು ಆದೇಶವಾಗಿದೆ.ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ಅನುಕೂಲಕರವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ಅವರು ರವಿವಾರ ಬೆಳಿಗ್ಗೆ ನಗರದ ರೇಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ರೈಲುಗಳ ನಿಲುಗಡೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ನಗರದ ರೈಲ್ವೆ ನಿಲ್ದಾಣದಲ್ಲಿ ರೈಲುಗಳು ನಿಲ್ಲದೇ ಇರುವುದರಿಂದ ಜನರಿಗೆ ತೊಂದರೆ ಆಗುತ್ತಿತ್ತು.ಅಲ್ಲದೇ ಇಲ್ಲಿನ ಜನರು ಬಹಳ ಹೋರಾಟ ಮಾಡಿದ್ದರು.ಕೇಂದ್ರ ರೇಲ್ವೆ ಸಚಿವರಿಗೆ ಹಲವಾರಿ ಬಾರಿ ಹೋಗಿ ಮನವಿ ಮಾಡಿದ್ದೆವು.ಇದರ ಫಲವಾಗಿ ರೈಲು ಸಂಖ್ಯೆ: 22157/ 22158 ಮುಂಬೈ ಚೆನ್ನೈ ಎಕ್ಸ್ಪ್ರೆಸ್, ರೈಲು ಸಂಖ್ಯೆ: 17029/17030 ಬಿಜಾಪುರ್ ಹೈದರಾಬಾದ್, ಎಕ್ಸ್ಪ್ರೆಸ್ ರೈಲು ಸಂಖ್ಯೆ: 11019/11020 ಕೋಣಾರ್ಕ ಎಕ್ಸ್ಪ್ರೆಸ್ ನಿಲುಗಡೆಯಾಗಲಿದೆ. ರೈಲು ನಿಲುಗಡೆಯಾಗಬೇಕೆಂಬುದು ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಈಡೇರಿದೆ ಎಂದರು.

ಈ ಸಂದರ್ಭದಲ್ಲಿ ಶಿವರಾಜ ಇಂಗಿನಶೆಟ್ಟಿ, ಮಹ್ಮದ್ ಉಬೇದುಲ್ಲಾ,ಶಿವಕುಮಾರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ್,ಚಂದ್ರಕಾಂತ ಗೊಬ್ಬೂರಕರ್,ಮಹಾದೇವ ಗೊಬ್ಬೂರಕರ್,ಡಾ.ಹಮ್ದ್ ಪಟೇಲ್, ಹಾಷಮ್ ಖಾನ್,ದತ್ತಾ ಫಂಡ್, ದಿನೇಶ ಗೌಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here