ನದಿ ಕಾಲುವೆಗೆ ನೀರು ಬಿಡುವಂತೆ ಜಿಲ್ಲಾಧಿಕಾರಿಗೆ ರಾಜುಗೌಡ ಮನವಿ

0
19

ಸುರಪುರ: ತಾಲೂಕಿನಲ್ಲಿ ಸರಿಯಾಗಿ ಮಳೆ ಇಲ್ಲದ ಕಾರಣ ನದಿಯಲ್ಲಿ ನೀರಿಲ್ಲ,ಹಳ್ಳಗಳು ಬತ್ತಿ ಹೋಗಿವೆ,ಆದ್ದರಿಂದ ಈಗ ಸುರಪುರ ನಗರಕ್ಕೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಜೊತೆಗೆ ದನ ಕರುಗಳಿಗೂ ನೀರಿನ ಸಮಸ್ಯೆ ಉದ್ಭವವಾಗಲಿದ್ದು,ನಾರಾಯಣಪುರ ಜಲಾಶಯದ ಕೃಷ್ಣಾ ನದಿಯ ಗೇಟ್ ಮುಖಾಂತರ ಕೃಷ್ಣಾ ನದಿಗೆ ಹಾಗೂ ಎಡದಂಡೆ ಕಾಲುವೆಯ ಎಸ್ಕೆಪ್ ಗೇಟ್‍ಗಳ ಮುಖಾಂತರ ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿಗೆ ಮತ್ತು ಹಳ್ಳಗಳಿಗೆ ನೀರು ಬಿಟ್ಟು,ಸುರಪುರ ನಗರಕ್ಕೆ ಮತ್ತು ಪಕ್ಕದ ಗ್ರಾಮಗಳ ಹಳ್ಳಗಳಿಗೆ ನೀರು ಹರಿಸಿ ಜನರಿಗೆ ಕುಡಿಯುವ ನೀರಿನ ತೊಂದರೆ ತಪ್ಪಿಸಬೇಕು,ಅದಕ್ಕಾಗಿ ಸಂಬಂಧಪಟ್ಟ ಜಲಾಶಯದ ಅಧಿಕಾರಿಗಳಿಗೆ ಆದೇಶ ಮಾಡುವಂತೆ ಜಿಲ್ಲಾಧಿಕಾರಿ ಡಾ:ಸುಶೀಲಾ ಬಿ ಅವರಿಗೆ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ,ಹೆಚ್.ಸಿ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here