ಕಸಾಪ ಗೌರವ ಕಾರ್ಯದರ್ಶಿ ಧನ್ನಿ ಅವರಿಗೆ ಸತ್ಕಾರ

0
84

ಕಲಬುರಗಿ; ಇತ್ತೀಚೆಗೆ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಯಾಗಿ ನೇಮಕಗೊಂಡ ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರನ್ನು ಇಲ್ಲಿಯ ಸ್ಟೆಷನ್ ಬಜಾರ್ ಎಸ್ ಆರ್ ಸಭಾಂಗಣದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಘಟಕ ಹಾಗೂ ಡಾ. ಅಂಬೇಡ್ಕರ್ ಸೇನೆ ಇವರ ಸಹಯೋಗದಲ್ಲಿ ಸತ್ಕರಿಸಿ ಗೌರವಿಸಲಾಯಿತು.

ಸನ್ಮಾನಿಸಿ ಗೌರವಿಸಿದ ಕರ್ನಾಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ ಮಾಲೆ ಅವರು ಮಾತನಾಡಿ, ಕಳೆದ ದಶಕಗಳಿಂದ ಸಾಹಿತ್ಯ, ಸಮಾಜ ಸೇವೆ ಹಾಗೂ ಸಾಂಸ್ಕøತಿಕ ಕಾರ್ಯಗಳನ್ನು ಮಾಡುತ್ತಿರುವ ಧರ್ಮಣ್ಣ ಧನ್ನಿ ಅವರ ಸಮಾಜಮುಖಿ ಕಾರ್ಯಗಳು ಮೆಚ್ಚುವಂಥವು. ಜೀವ ಪರ ಮತ್ತು ಜನಪರ ನಿಲುವುಗಳ ಕುರಿತು ತಮ್ಮ ಸಾಹಿತ್ಯ ಕೃಷಿಯಲ್ಲಿ ಬಿಂಬಿಸಿದ್ದಾರೆ. ಜನಸಾಮಾನ್ಯರ ಬವಣೆಗಳನ್ನು ಕಾವ್ಯದ ಮೂಲಕ ಎತ್ತಿ ತೋರಿಸಿ ಪರಿಹಾರ ಹುಡುಕುವ ಕವಿ ಧನ್ನಿ ಅವರನ್ನು ಗೌರವ ಕಾರ್ಯದರ್ಶಿಯನ್ನಾಗಿ ಮಾಡಿದ್ದು ಅಭಿನಂದನಾರ್ಹವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

Contact Your\'s Advertisement; 9902492681

ಸನ್ಮಾನ ಸ್ವೀಕರಿಸಿದ ಧರ್ಮಣ್ಣ ಧನ್ನಿ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ. ನಾಡಿನ ನೆಲ ಜಲ ಹಾಗೂ ಸಂಸ್ಕøತಿಯ ಅಭಿವೃದ್ಧಿಗೆ ಶ್ರಮಿಸಲು ಜವಾಬ್ದಾರಿ ದೊರೆತಿದೆ ಎಂದು ಹೇಳಿದರು.

ಡಾ. ಅಂಬೇಡ್ಕ್ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಗಾಯಕವಾಡ, ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಈರಣ್ಣ ಜಾನೆ, ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ, ಮಹಾದೇವ ನಾಟೀಕರ್, ಮಲ್ಲಿಕಾರ್ಜುನ ಉದಯಕರ, ವಿಜಯಕುಮಾರ ಉದ್ದಾ, ಜಯಶ್ರೀ, ರುಕ್ಮೋದ್ದೀನ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here