ಕಲಬುರಗಿ; ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

0
10

ಕಲಬುರಗಿ; ಶ್ರೀ ಜಗದ್ಗುರು ರೇಣುಕಾಚಾರ್ಯ ರೇಣುಕಾ ಆಚಾರ್ಯ ಜಯಂತಿಯಲ್ಲಿ ನೂರಾರು ಮಹಿಳೆಯರು ಕುಂಭೋತ್ಸವದಲ್ಲಿ ಭಾಗವಹಿಸಿದ್ದೀರಿ ನನಗೆ ತುಂಬಾ ಸಂತೋಷ ತಂದಿದೆ ಎಂದು ಕಟ್ಟಿಮನಿ ಹಿರೇಮಠ, ಪಾಳಾದ ಶ್ರೀ.ಷ.ಬ್ರ.ಡಾ. ಹಿರೇಮಠ ಪಾಳಾ ದಿವ್ಯ ಸಾನಿದ್ಯ ವಹಿಸಿ ಡಾ. ಗುರುಮೂರ್ತಿ ಶಿವಾಚಾರ್ಯರು ಮಾತನಾಡಿದರು.

ಶನಿವಾರದಂದು ಕಲಬುರಗಿ ಜಿಲ್ಲೆಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿ ಈ ಕಾರ್ಯಕ್ರಮವು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಕಾರ್ಯಕ್ರಮವಾಗಿದೆ ಎಂದರು.

Contact Your\'s Advertisement; 9902492681

ಚಂದನಕೇರ ಶ್ರೀ ವೇದಮೂರ್ತಿ ಪಂಡಿತ ಶಿವರುದ್ರಯ್ಯ ಶಾಸ್ತಿçಗಳು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗದೆ ಸಮಾಜದ ಸೋಪಾನವಾಗಿವೆ ಎಂದರು.

ದ್ವೇಷ-ಅಸೂಯೆಗಳನ್ನು ಬಿಟ್ಟು ಶಾಂತಿ-ಸಹಬಾಳ್ವೆಯ ಮಹತ್ವವನ್ನು ಅರಿಯಬೇಕೆಂಬ ಉದ್ದೇಶದಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಸೌಹಾರ್ದ ಶಾಂತಿ ಸಮೇಳನದ ಹೆಸರಿನಲ್ಲಿ ಆಯೋಜಿಸಲಾಗಿದೆ. ಗಣ್ಯರಿಂದ ಜಗದ್ಗುರು ರೇಣುಕಾಚಾರ್ಯ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಿದ್ದರು.

ವೇದಿಕೆ ಮೇಲೆ ಜಿಲ್ಲಾಧಿಕಾರಿ ಶಿಷ್ಟಚಾರದ ತಹಶೀಲ್ದಾರ ಸೈಯದ್ ನಿಸಾರ ಅಹ್ಮದ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಜಂಗಮ ಸಮಾಜ ಅಧ್ಯಕ್ಷರು ರಾಚೋಟಿಯ್ಯ ಹಿರೇಮಠ ಹಾಗರಗುಂಡಗಿ, ಜಂಗಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷರು ಅನ್ನಪೂರ್ಣ ಹೀರೆಮಠ, ಸೇರಿದಂತೆ ಸಮಾಜದ ಮುಖಂಡು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here