ಕಲಬುರಗಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ

0
1880

ಕಲಬುರಗಿ; ಕಾರ್ಪೆಂಟರ್ ಕೆಲಸ ಮಾಡುತ್ತಿದ ಪಕ್ಕದ ಮನೆಯುವನಿಂದನ್ನೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಇಂದು ನಡೆದಿದೆ.

ಹೊನ್ನಕಿರಣಗಿ ಗ್ರಾಮದ ನಿವಾಸಿ ಈರಣ್ಣ ತಂದೆ ದಿ.ಮಹಾದೇವಪ್ಪ ಬಡಿಗೇರ್ (38) ಕೊಲೆಯಾದ ದುರ್ದೈವಿ. ಈರಣ್ಣ ಇವರು ನೀರು ತರಲು ಹಳ್ಳದ ಭೂರವಲ್ಲಿಗೆ ಹೋಗುತ್ತಿರುವ ಸಮಯದಲ್ಲಿ ಹಿಂದಗಡೆಯಿಂದ ಬಂದ ನಾಗಯ್ಯ ಸ್ವಾಮಿ ಮಠಪತಿಯವರು ಹೊಲದ ಗಟ್ಟಿನಲ್ಲಿರುವ ಕಲ್ಲು ತೆಗೆದುಕೊಂಡು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಈರಣ್ಣ ಮತ್ತು ನಾಗಯ್ಯ ಅವರು ಅಕ್ಕ ಪಕ್ಕದ ಮನೆಯವರಾಗಿರುತ್ತಾರೆ. ಈರಣ್ಣವರು ಕಲಬುರಗಿಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದೆ.

ಈ ಕುರಿತು ಫರತಹಬಾದ್ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here