ಕಲಬುರಗಿ; ಕಲಬುರಗಿ ಲೋಕಸಬೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಪರವಾಗಿ ಕೆಕೆಆರ್ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಅವರು ತಮ್ಮ ಮತಕ್ಷೇತ್ರ ವಾಗಿರುವ ಜೇವರ್ಗಿ ತಾಲ್ಲೂಕಿನ ಹಳ್ಳಿಗಳನ್ನೆಲ್ಲ ಸುತ್ತಿ ಸಭೆಗಳನ್ನು ನಡೆಸುತ್ತ ಮತ ಯಾಚಿಸುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳು ಬಡವರ ಬದುಕಿಗೆ ಹೇಗೆ ನೆರವಾಗುತ್ತಿವೆ ಎಂಬ ಸಂಗತಿಗಳನ್ನು ವಿವರಿಸುತ್ತ ಲೋಕಸಭೆಯಲ್ಲಿ ಕಾಂಗ್ರೆಸ್ 25 ಗ್ಯಾರಂಟಿಗಳನ್ನು ವಿವರಿಸಿ ಮನೆ ಮನೆಗೂ ತಲುಪಿಸುತ್ತಿದ್ದಾರೆ.
ಮಂಗಳವಾರ ಜೇವರ್ಗಿ ತಾಲೂಕಿನ ಇಟಗಾ ಗ್ರಾಮದಲ್ಲಿ ಸಭೆ ನಡೆಸಿದ ಡಾ. ಅಜಯ್ ಸಿಂಗ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಸರಳ ವ್ಯಕ್ತಿತ್ವ ಇದ್ದವರು. 4 ದಶಕದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇವರ ಆಯ್ಕೆಯಿಂದ ಅಭಿವೃದ್ಧಿಯ ಹೊಳೆಯೇ ಹರಿದು ಬರಲಿದೆ ಎಂದು ಮತದಾರರಿಗೆ ಮನವರಿಕೆ ಮಾಡಿದರು.
ಇಟಗಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಖಂಡರೊಂದಿಗೆ ಸಭೆ ನಡೆಸಿ ಮತಯಾಚನೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ ಭೀಮಾಶಂಕರ್ ವಿಭೂತಿ, ಅಪ್ಪಸಾಬ ಹೊಸಮನಿ , ಸಂಗಣ್ಣ ಇಟಗಾ , ಪಿ ಜಿ ಕಾಳೆ, ಶರಣಬಸಪ್ಪ ಜೋಗುರ್, ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.