ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು; ಶಿವರಾಜ ಅಂಡಗಿ

0
152

ಕಲಬುರಗಿ; ಪ್ರಜಾಪ್ರಭುತ್ವ ಬಲಪಡಿಸಲು ದೇಶದ ಪ್ರತಿಯೊಬ್ಬ ಮತದಾರರು ಬರುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಶಿವರಾಜ ಅಂಡಗಿ ಹೇಳಿದರು.

ನಗರದ ರಂಗಾಯಣ ಕಚೇರಿಯ ಎದುರುಗಡೆಯಿರುವ ಪ್ರಶಾಂತ ನಗರದಲ್ಲಿ ರಾಜಶೇಖರ ಐನಾಪೂರ ಅವರು ನೂತನವಾಗಿ ನಿರ್ಮಿಸಿದ ಮನೆ ಗೃಹಪ್ರವೇಶಕ್ಕೆ ಬಂದ ನೂರಾರು ಸಾರ್ವಜನಿಕರಿಗೆ ಟೇಂಗಳಿ ಪ್ರತಿóಷ್ಠಾನ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಕುರಿತು ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳು ಹೇಗೆಂದರೆ ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೆ ಅದರದೇ ಆದ ಮೌಲ್ಯವಿದೆ. ಹಾಗಾಗಿ ನಾವೂ ನೀವೆಲ್ಲರು ಬರುವ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಇನ್ನೂ ಗಟ್ಟಿಗೊಳಿಸಬೇಕೆಂದು ಹೇಳುತ್ತಾ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಸದರಿ ಅಭಿಯಾನದಲ್ಲಿ ಬಾಬುರಾವ ಐನಾಪೂರ, ರಾಜಶೇಖರ ಐನಾಪೂರ, ರಾಜಕುಮಾರ ಐನಾಪೂರ, ವಿನಾಯಕ, ಮೀನಾಕ್ಷಿ, ವೀರಮಣಿ, ಲಕ್ಷ್ಮೀ, ಅರುಣ, ಸಂತೋಷ, ಸಂಗಮೇಶ, ಗುಂಡಾಚಾರ್ಯ, ಮೋತಿರಾಮ, ವೆಂಕಟರೆಡ್ಡಿ, ತುಳಸಿರಾಮ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here