ವಾಡಿ: ಮೋದಿ ಗ್ಯಾರಂಟಿ ಗಾಡಿಗೆ ಬಿಜೆಪಿ ಮುಖಂಡರಿಂದ ಚಾಲನೆ

0
118

ವಾಡಿ: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ವಿಕಸಿತ ಭಾರತ ಮೋದಿ ಗ್ಯಾರಂಟಿ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ನಮ್ಮ ಮೋದಿಜಿ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸುವಂತದ್ದಾಗಿವೆ ಬಡವರು, ರೈತರು, ಮಹಿಳೆಯರೇ ಫಲಾನುಭವಿಗಳಾದ, ಅವರಿಗೆ ನೇರವಾಗಿ ತಲುಪುವ ಯೋಜನೆಗಳನ್ನು ಮೋದಿ ನೇತೃತ್ವದ ಸರ್ಕಾರ ಜಾರಿ ಮಾಡಿದೆ ಎಂದು ಹೇಳಿದರು.

Contact Your\'s Advertisement; 9902492681

ಅದರ ಜೊತೆಗೆ ನಮ್ಮ ಸಹೋದರಿಯರಿಗೆ,ದೇಶಕ್ಕೆ ರಕ್ಷಣೆ ನೀಡುವುದೇ ಮೋದಿ ಜಿ ಗ್ಯಾರಂಟಿ, ಕೇಂದ್ರದಿಂದ ಬಿಡುಗಡೆ ಆಗುವ ಬಡವರ,ರೈತರ ಮತ್ತು ಮಹಿಳೆಯರ ಮೊತ್ತದಲ್ಲಿ ಒಂದು ಪೈಸೆ ಕೂಡ ಸೋರಿಕೆ ಆಗುತ್ತಿಲ್ಲ. ಮಧ್ಯವರ್ತಿಗಳ ಜೇಬಿಗೆ ಹೋಗುತ್ತಿಲ್ಲ’ ಎಂಬುದೇ ನಮ್ಮ ಗ್ಯಾರಂಟಿ.
ಇದನ್ನು ನೆನಪಿಸು ಅನೇಕ ಉದಾಹರಣೆಗಳೊಂದಿ ಈ ಪ್ರಚಾರ ವಾಹನ ಪ್ರತಿ ಬೂತ್ ಸಂಚರಿಸಲಿದ್ದು ಇದರಿಂದ ನಮಗೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಜಯಗಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ,ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡ ರಾದ ಅಶೋಕ ಪವಾರ,ಹರಿ ಗಲಾಂಡೆ, ಆನಂದ ಇಂಗಳಗಿ, ಸತೀಶ ಸಾವಳಗಿ, ಚಂದ್ರಾಮ ರಾಜೋಳ್ಳಿ,ಹಣಮಂತ ಕೆಲ್ಲೂರ,ಸಂದರ ರಾಜ್,ಮಲ್ಲಿಕಾರ್ಜುನ ಸಾತಖೇಡ,ಯಂಕಮ್ಮ ಗೌಡಗಾಂವ,ಅನುಷಾ ಬಾಯಿ ಪವಾರ,ಶರಣಮ್ಮ ಯಾದಗಿರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here