ಕಲಬುರಗಿ: ನಗರದ ಹಿರಾಪುರ ಬಡಾವಣೆಯಲ್ಲಿ ಶುಕ್ರವಾರ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 891ನೇ ಜಯಂತಿ ಪ್ರಯುಕ್ತವಾಗಿ ಅಖಿಲ ಕರ್ನಾಟಕ ಹೆಳವ ಸಮಾಜ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಬಸವಣ್ಣನವರ, ಮುಕ್ತಿನಾಥಯ್ಯ, ಬಸವ ಬೃಂಗೇಶ್ವರ ಹಾಗೂ ಶಂಕರಲಿಂಗ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿ. ಹೆಚ್, ಶ್ರೀಮಂತ ಸೌಂದರ್ಗಿ, ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ಸಿದ್ದರಾಮ ಬೈರಾಮಡಗಿ, ರೇವಣಸಿದ್ದಪ್ಪ ಹೆಳವರ, ಗಂಗಾಧರ ಹೆಳವರ, ಬಸವರಾಜ ಹೆಳವರ ಯಾಳಗಿ, ನಾಗಪ್ಪ ಹೆಳವರ, ಮಲ್ಲಿಕಾರ್ಜುನ ಹಿರಾಪುರ, ರಾಜು ಹಿರಾಪುರ, ರಾಯಪ್ಪ, ಸುರೇಶ, ನಾಗರಾಜ, ಇನ್ನಿತರ ಸಮಾಜದ ಮುಖಂಡರು ಮತ್ತು ಯುವಕರು ಭಾಗವಹಿಸಿದ್ದರು.