ಕಲಬುರಗಿ: ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ (ರ.ಅ) ಅವರ 620ನೇ ಉರುಸ್ ನಿಮಿತ್ತ ಶುಕ್ರವಾರ ನಗರದ ಮೆಹಬೂಬ್ ಗುಲ್ಶನ್ ಗಾರ್ಡನನಲ್ಲಿ ದರ್ಗಾದ ಪೀಠಾಧಿಪತಿಗಳಾದ ಸಜ್ಜಾದೇ ನಶೀನ್ ಡಾ. ಸಯ್ಯದ ಶಾಹ ಖುಸ್ರೋ ಹುಸ್ಸೇನಿ ಗಂಧದ ಮೆರವಣಿಗೆಗೆ ಚಾಲನೆ ನೀಡಿದರು.
ಗಂಧದ ಮೆರವಣಿಗೆ ಮೆಹಬೂಬ್ ಗುಲ್ಶನ್ ಗಾರ್ಡನನಿಂದ, ಜಗತ್ ಸರ್ಕಲ್ಗೆ, ಸೂಪರ್ ಮಾರ್ಕೆಟ, ಚೌಕ ಸರ್ಕಲ್ನಿಂದ ಗಣೇಶ್ ಮಂದಿರ, ಬಹಮನಿ ಚೌಕ ಮತ್ತು ಹಫ್ತ್ ಗುಂಬದ ಮಾರ್ಗವಾಗಿ ದರ್ಗಾ ಶರೀಫ್ಗೆ ತಲುಪಿತು.
ಇದಕ್ಕೂ ಮುನ್ನ ಶುಕ್ರವಾರ ನಮಾಝ್ ನಂತರ ಗಂಧದ ಮೆರವಣಿಯ ಸಂಪ್ರದಾಯ ಆರಂಭಗೊಂಡಿತು. ಜಾಲಾಲಿ ಫಕೀರಗಳ ಕರ್ಬ್ ಗಳ ಮತ್ತು ನಾಥ್ ಗಳ ಮೂಲಕ ಮೆರವಣಿಗೆ ಗಮನಸೆಳೆಯಿತು.
ರಾತ್ರಿ 10.30ಕ್ಕೆ ದರ್ಗಾದ ಗ್ಯಾರಾ ಸಿಡಿಯಲ್ಲಿ ಗಂಧ್ ತಲುಪುದ್ ಸಮಯದಲ್ಲಿ ಜನಾಬ್ ಸೈಯದ್ ಮುಹಮ್ಮದ್ಲಿ ಅಲ್ ಹುಸೇನಿ, ಜನಾಬ್ ಡಾ ಸೈಯದ್ ಮುಸ್ತಫಾ ಅಲ್ ಹುಸೇನಿ,ಜನಾಬ್ ಸೈಯದ್ ಷಾ ಹಸನ್ ಶಬ್ಬೀರ್ ಹುಸೇನಿ ಸಾಹೇಬ್ ಸಜ್ಜಾದ ನಹಿಂ ರೌಜಾ ಖುರ್ದ್, ಜನಾಬ್ ಸೈಯದ್ ಶಾ ತಕಿವುಲ್ಲಾ ಹುಸೇನಿ, ಜನಾಬ್ ಮೀರ್ ಸದರುದ್ದೀನ್ ಅಲಿ ಖಾನ್, ಜನಾಬ್ ಮೀರ್ ಸದರುದ್ದೀನ್ ಅಲಿ ಖಾನ್ ಶರೀಫ್ ಮತ್ತು ಇತರರು ಹಾಜರಿದ್ದರು.