ಕಲಬುರಗಿ: ಶ್ರೀ ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲೆಯ ಚಿಕ್ಕಗೊಬ್ಬುರ ಗ್ರಾಮ ಸಮಿತಿ ಅಧ್ಯಕ್ಷರನ್ನಾಗಿ ಗುಂಡೆರಾಯ ಬಸವರಾಜ ಮಾಲಿಪಾಟೀಲ್, ಉಪಾಧ್ಯಕ್ಷರನ್ನಾಗಿ ಮಲ್ಲಿನಾಥ್ ಪೆÇಲೀಸ್ ಪಾಟೀಲ್ ಹಾಗೂ ವೇದಿಕೆಯ ಪದಾಧಿಕಾರಿಗಳಿಗೆ ನೇಮಕ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಪ್ರಶಾಂತ್ ಕಲ್ಲೂರ್, ರಾಜ್ಯ ಸಮಿತಿಯ ಶ್ರೀಧರ್ ಎಮ್ ನಾಗನಹಳ್ಳಿ ಹಾಗೂ ಜಿಲ್ಲಾ ಅಧ್ಯಕ್ಷ ದಯಾನಂದ ಪಾಟೀಲ್ ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಗಳನ್ನು ಮಾಡುವಂತಹ ಹಾಗೂ ನಿಸ್ವಾರ್ಥದ ಸೇವೆಯನ್ನು ಮಾಡುವಂತಹ ತಂಡ ನಿಮ್ಮದಾಗಲಿ ಎಂದು ಮತ್ತು ತಾವು ಸಂಘದ ನೀತಿ ನಿಯಮಗಳಿಗೆ ಬದ್ಧರಾಗಿದ್ದು ರಾಜ್ಯ ಅಧ್ಯಕ್ಷರಿಗೆ ಹಾಗೂ ಸಂಘಟನೆಗೆ ಸಹಕಾರ ನೀಡುವ ಮೂಲಕ ಎಲ್ಲಾ ನಿಯಮ ನಿಬಂಧನೆಗಳಿಗೆ ಬದ್ದರಾಗಿದ್ದು ಕಾಲ ಕಾಲಕ್ಕೆ ರಾಜ್ಯ ಜಿಲ್ಲೆ ತಾಲೂಕ ಘಟಕದಿಂದ ಬಂದ ಅಂತಹ ಅದೇಶಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುತ್ತಿರೆಂದು ನಂಬಿ ಈ ಪತ್ರದ ಮೂಲಕ ಆದೇಶಸಲಾಗಿದೆ.
ಈ ಸಂದರ್ಭದಲ್ಲಿ ಕಲ್ಯಾಣರಾವ ಪಾಟೀಲ ಕಣ್ಣಿ, ಮಹೇಶಚಂದ್ರ ಪಾಟೀಲ ಕಣ್ಣಿ, ಸುನೀಲ ಮಹಾಗಾವಕರ್, ಆನಂದ ಕಣಸೂರ, ಗುರುರಾಜ ಅಂಬಾಡಿ, ಪರಮೇಶ್ವರ ಯಳಮೇಲೆ, ವೀರೆಶ ಟೆಂಗಳಿ ಸೇರಿದಂತೆ ವೇದಿಕೆಯ ಸದಸ್ಯರು ಇದ್ದರು.