ಶಹಾಬಾದ: ಪದವೀಧರರ ಸಮಸ್ಯೆಗಳನ್ನು ಪರಿಹರಿಸುವ ಎಲ್ಲಾ ಅನುಭವ ಅಮರನಾಥ ಪಾಟೀಲ ಅವರಿಗೆ ಬಿಟ್ಟರೇ ಯಾರಿಗೂ ಆ ಅನುಭವವಿಲ್ಲ.ಆದ್ದರಿಂದ ಈ ಕ್ಷೇತ್ರಕ್ಕೆ ಅವರೇ ಸೂಕ್ತ ವ್ಯಕ್ತಿಯಾಗಿದ್ದು, ಮೊದಲನೇ ಪ್ರಾಶಸ್ತ್ಯದ ಮತ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗೆ ನೀಡಬೇಕೆಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶನಿವಾರ ವಿಧಾನ್ ಪರಿಷತ್ ಚುನಾವಣೆಯ ನಿಮಿತ್ತ ನಗರದ ವಿವಿಧ ಶಾಲಾ- ಕಾಲೇಜುಗಳಿಗೆ ಬೇಟಿ ಮಾಡಿ ಪದವೀಧರ ಮತದಾರರಿಗೆ ಅಮರನಾಥ ಪಾಟೀಲ ಪರ ಮತಯಾಚಿಸಿ ಮಾತನಾಡಿದರು.
ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ ಸಾಕಷ್ಟು ಅನುಭವ ಅವರಿಗಿದೆ.ಅಲ್ಲದೇ ಸದನದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಪದವೀಧರರ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಾರೆ. ಕಾರಣಾಂತರ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿತು. ಸದ್ಯ ಅವರು ಈಶಾನ್ಯ ಪದವೀಧರ ಮತಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದು ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.ಅಲ್ಲದೇ ನಮ್ಮಿಂದಾಗುವ ಯಾವುದೇ ಕೆಲಸಗಳಿದ್ದರೂ ಅದನ್ನು ನಾವು ಮಾಡಲು ಸಿದ್ದರಿದ್ದೆವೆ ಎಂದು ಹೇಳಿದರು.
ಅಲ್ಲದೇ ಮೊಬೈಲ್ ಮುಖಾಂತರ ಮತಯಾಚನೆ ಮಾಡಲು ಶಹಾಬಾದ ಮಂಡಲ ಕಾರ್ಯಾಲಯದಲ್ಲಿ ದೂರವಾಣಿ ಕೇಂದ್ರ (ಕಾಲ ಸೆಂಟರ್) ಉದ್ಘಾಟಿಸಿದರು.
ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೊಳಕರ, ಮುಖಂಡರಾದ ಅಣವೀರಪ್ಪ ಇಂಗಿನಶೆಟ್ಟಿ, ಅರುಣ ಪಟ್ಟಣಕರ, ಅನೀಲ ಬೋರಗಾಂವಕರ್, ಚಂದ್ರಕಾಂತ ಗೊಬ್ಬೂರಕರ್, ಸಿದ್ರಾಮ ಕುಸಾಳೆ, ದೇವದಾಸ ಜಾಧವ, ದಿನೇಶ ಗೌಳಿ, ಮಹದೇವ ಗೊಬ್ಬೂರಕರ, ಶಿವಕುಮಾರ ಇಂಗಿನಶೆಟ್ಟಿ, ಭೀಮರಾವ ಸಾಳುಂಕೆ, ನಾಗರಾಜ ಮೇಲಗಿರಿ, ಸೂರ್ಯಕಾಂತ ವಾರದ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ಅನೀಲಕುಮಾರ ಬೊರಗಾಂಕರ, ಅಮರ ಕೊರೆ, ಕನಕಪ್ಪ ದಂಡಗುಲಕರ, ಯಲ್ಲಪ್ಪ ದಂಡಗುಲಕರ, ಶಿವಗೌಡ ಪಾಟೀಲ, ಜಯಶ್ರೀ ಸೂಡಿ, ಶಶಿಕಲಾ ಸಜ್ಜನ, ಪಾರ್ವತಿ ಪವಾರ, ಪದ್ಮಾ ಕಟಕೆ, ನೀಲಗಂಗಮ್ಮ ಗಂಟ್ಲಿ, ನಂದಾ ಗುಡೂರ, ಸೇರಿಂದತೆ ವಿವಿಧ ಪದಾಧಿಕಾರಿಗಳು, ಘಟನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.