ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ನಿಮಿತ್ತ ಸೇವಾ ಸಪ್ತಾಹ ಕಾರ್ಯಕ್ರಮ

0
38

ಕಲಬುರಗಿ: ಹೊರವಲಯದ ಸೈಯದ್ ಚಿಂಚೋಳಿ ಸಮೀಪದ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಭಾರತಿಯ ಜನತಾ ಪಾರ್ಟಿ ಉತ್ತರ ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ನಿಮಿತ್ತ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ವೃದ್ಧರಿಗೆ ಉಚಿತವಾಗಿ  ಹಣ್ಣು ಹಂಪಲ್ ಹಾಗೂ ಹೊದಿಕೆ (ಚಾದರ) ವಿತರಿಸಲಾಯಿತು.

ಸಂಸದ ಡಾ.ಉಮೇಶ ಜಾಧವ್, ಬಿಜೆಪಿ  ಮಹಾನಗರ ಜಿಲ್ಲಾಧ್ಯಕ್ಷರಾದ ಎಮ್‌ಎಲ್‌ಸಿ ಬಿ.ಜಿ.ಪಾಟಿಲ್, ಬಿಜೆಪಿ ಯುವ ಮುಖಂಡ ಚಂದು ಪಾಟಿಲ್, ವಿಠ್ಠಲ್ ಜಾಧವ್, ಉಮೇಶ ಪಾಟೀಲ್, ಪರಶುರಾಮ ನಸಲವಾಯಿ, ಚನ್ನವೀರ ಲಿಂಗನವಾಡಿ, ಸಿದ್ದಾಜಿ ಪಾಟೀಲ್, ಕೃಷ್ಣ ನಾಯಕ, ಅನೀಲ ಜಾಧವ, ಸಿದ್ದು ಸಂಗೋಳಗಿ, ವರ್ದಶಂಕರ ಶೆಟ್ಟಿ, ಶರಣು ಮಡಿವಾಳ, ಸಂತೋಷ ರಾಮಪೂರೆ ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here