ಕಲಬುರಗಿ: ಬಿಸಿಎಂ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗಳ ಸಮಸ್ಯೆ ಅಲಿಸಿದ ಜಿಲ್ಲಾ ಕಲ್ಯಾಣಧಿಕಾರಿ ಪ್ರಭು ದೊರೆ

0
341

ಕಲಬುರಗಿ: ಜಿಲ್ಲಾ ಹಿಂದುಳಿದ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಹೊರಸಂಪನ್ಮೂಲ ಸಿಬ್ಬಂದಿ, ಪ್ರತಿನಿಧಿಗಳು, ಏಜೆನ್ಸಿಗಳ ಮತ್ತು ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ಸಮಸ್ಯೆಗಳ ಕುರಿತು ಇಲಾಖೆಯಲ್ಲಿ ಸಭೆ ನಡೆಯಿತು.

ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಭು ದೊರೆ ಅಧ್ಯಕ್ಷತೆಯಲ್ಲಿ ಹೊರಸಂಪನ್ಮೂಲ ಸಿಬ್ಬಂದಿಗಳ ವೇತನ ಪಾವತಿ, ಇಪಿಎಫ್ ಮತ್ತು ಇಎಸ್ಐ ಜಮಾ ಮತ್ತು ಬಾಕಿ ವೇತನ ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

Contact Your\'s Advertisement; 9902492681

ಸಭೆಯಲ್ಲಿ ವಸತಿ ನಿಲಯ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಭೀಮಶೆಟ್ಟಿ ಯಂಪಳ್ಳಿ, ಕಚೇರಿ ವ್ಯವಸ್ಥಾಪಕರಾದ ಮಹ್ಮದ್ ಆರೀಫ್, ತಾಲೂಕ ಅಧಿಕಾರಿ ಡಾ. ಕರಬಸಮ್ಮ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here