ಬೆಂಗಳೂರು: ಇಂದು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ ಜಿ ಜಾಧವರವರು ಇಂದು ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿ ಚಿಂಚೋಳಿ ಹಾಗೂ ಶಾಹಬಾದ್ ಕಲ್ಲು-ಗಣಿಗಾರಿಕೆ ಬಗ್ಗೆ ಇರತಕ್ಕಂತ ಅಡಚಣೆಗಳ ಬಗ್ಗೆ ಗಣಿ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸುನೀಲ ವಲ್ಯಾಪೂರೆ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಕಲಬುರಗಿ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಶಾಸಕರು ಮಾಜಿ ಸಚಿವರು ಉಪಸ್ಥಿತರಿದ್ದರು.