ಸುರಪುರ:ತಾಲೂಕಿನ ಹಂದ್ರಾಳ ಎಸ್.ಡಿ ಗ್ರಾಮದ ಬಳಿ ಎಲ್ಲಾ ಬಸ್ಗಳ ನಿಲುಗಡೆಗಾಗಿ ಬಸ್ ತಂಗುದಾಣದ ನಾಮಫಲಕ ಅನಾವರಣಗೊಳಿಸಲಾಗಿದೆ.
ಇದೇ ಸಂದರ್ಭದಲ್ಲಿ ನಾಮಫಲಕಕ್ಕೆ ಹಾಗೂ ನಿಲುಗಡೆಗೊಳಿಸಿದ ಬಸ್ಗೂ ತಳಿರು ತೋರಣಗಳಿಂದ ಸಿಂಗರಿಸಿ ಸಂಭ್ರಮಾಚರಿಸಿದರು.ಇದೇ ಸಂದರ್ಭದಲ್ಲಿ ದಲಿತ ವಿಮೋಚನಾ ಸೇನೆ ತಾಲೂಕ ಅಧ್ಯಕ್ಷ ಶರಣು ಅನಸೂರ ಮಾತನಾಡಿ,ಕಳೆದ ಕೆಲ ದಿನಗಳ ಹಿಂದೆ ನಮ್ಮ ಸಂಘಟನೆಯಿಂದ ಸುರಪುರ ತಾಲೂಕ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ ಬಸ್ ತಂಗುದಾಣ ನಿರ್ಮಾಣ ಹಾಗೂ ಎಲ್ಲಾ ಬಸ್ಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು ಎಂದು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ದಲಿತ ವಿಮೋಚನಾ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಡಿಮಟ್ಟಿ,ತಾಲೂಕ ಅಧ್ಯಕ್ಷ ಶರಣು ಅನಸೂರ ಹಾಗೂ ಗ್ರಾಮದ ಮುಖಂಡರಾದ ಸಿದ್ದನಗೌಡÀ ಮೆಂಬರ್,ಬಸನಗೌಡ ಮಾಲಿ ಪಾಟೀಲ್,ಬಸನಗೌಡ ದಳಪತಿ,ಅಂಬ್ರಣ್ಣ ಮಾಜಿ ಮೆಂಬರ್,ಅಂಬಯ್ಯಗೌಡ ದೊಡ್ಮನಿ,ಹಣಮಂತ್ರಾಯಗೌಡ ಸರ್ಜಾಪುರ,ಗುರನ್ನಾಡಿಗರ ಕುಲಕರ್ಣಿ,ಶ್ರೀನಿವಾಸರಾವ್ ಕುಲಕರ್ಣಿ ಸೇರಿದಂತೆ ಸುರಪುರ ಬಸ್ ಡಿಪೋ ವ್ಯವಸ್ಥಾಪಕರು ಹಾಗೂ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರು ಸೇರಿದಂದೆ ಅನೇಕರು ಭಾಗವಹಿಸಿದ್ದರು.