ಟಿಎಪಿಸಿಎಂ ಅಧ್ಯಕ್ಷರಾಗಿ ಪಾಟೀಲ್ ಅವಿರೋಧ ಆಯ್ಕೆ

0
39

ಕಲಬುರಗಿ: ಸಹಕಾರಿ ಕ್ಷೇತ್ರದ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಟಿಎಪಿಸಿಎಂ) ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಜಗದೀಶ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಸಂಗಮೇಶ್ವರ ಕರಬಸಪ್ಪಚೋರಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.

Contact Your\'s Advertisement; 9902492681

ನಿರ್ದೇಶಕರುಗಳಾದ ಅಯ್ಯುಬ ಪಟೇಲ್ ತಾವರಗೇರಾ, ಶರಣಕುಮಾರ ಅಂಬಲಗಿ, ಶಿವಪುತ್ರಪ್ಪ ಹತಗುಂದಿ, ಅಮರ ಪಾಟೀಲ್, ದಾಸಮಯ್ಯ ವಡ್ಡನಕೇರಿ, ಝಾಕೀರ ಹುಸೇನ್, ಮಹಾದೇವಿ ಸಿಂಗೆ, ಸರಸ್ವತಿ ಗುರಾಗೋಳ, ಮನೋಹರ ತುಳಜಪ್ಪ, ವಿಠಲ ಚಂದ್ರಶಾ, ರವೀಂದ್ರಕುಮಾರ ಕಲ್ಲೂರ ಪಾಲ್ಗೊಂಡಿದ್ದರು.

ಕಳೆದ ಸೆ.1 ರಂದು ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. ಈಗ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯನ್ನು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿಗಳಾದ ಪ್ರಮೋದ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ವಿಜಯೋತ್ಸವದ: ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಂತರ ವಿಜಯೋತ್ಸವ ನಡೆಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶರಣಬಸಪ್ಪ ಪಾಟೀಲ್ ಅಷ್ಠಗಿ, ಪ್ರಮುಖರಾದ ಹರ್ಷವರ್ಧನ ಗುಗಳೆ, ಶಿವಕುಮಾರ ಪಾಟೀಲ್ ಜಮಗಾ, ಶಿವಕುಮಾರ ಉಪ್ಪಿನ, ಶ್ರೀಮಂತರಾವ ದಳಪತಿ ಮುಂತಾದವರು ವಿಜಯೋತ್ಸವದಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here