ಆಹಾರ ಕ್ರಮ ಅರಿತರೆ ರೋಗವನ್ನು ದೂರವಿಡಬಹುದು

0
66

ಕಲಬುರಗಿ: ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಹಾಗೂ ಕಂಪನಿಯೋ ಸಹಯೋಗದಲ್ಲಿ ಇಂದು “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಕುರಿತು ಮಾತನಾಡಿದ ಕಂಪಾನಿಯೋ ಮುಖ್ಯಸ್ಥ ಹಾಗೂ ಆರೋಗ್ಯ ತಜ್ಞ ರತ್ನಾಕರ ಶೆಟ್ಟಿ ನಮ್ಮ ಕೈಯಲ್ಲೆ ನಮ್ಮ ಆರೋಗ್ಯವಿದೆ.ಆಹಾರ ಕ್ರಮ ಅರಿತರೆ ರೋಗದಿಂದ ದೂರವಿರಹಬಹುದು.ದೈನಂದಿನ ಚಟುವಟಿಕೆಗಳಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು.

Contact Your\'s Advertisement; 9902492681

ನಮ್ಮ ದೇಹದಲ್ಲಿ ರಕ್ತ ಚಲನೆ ಸರಾಗವಾಗಿದ್ದರೆ ಯಾವ ರೋಗವು ಬರಲಾರದು.ಇದಕ್ಕಾಗಿ ದಿನ ವಿತ್ತ 5 ಕುಲೋ ಮೀಟರ ನಡಿಗೆ ಇರಬೇಕು ಎಂದರು.13 ದಿನದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದಲ್ಲಿ ದಿವು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು ಇದರ ಸದುಪಯೋಗ ಪಡೆದು ಕೊಳ್ಳುತ್ತಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದರು.

ಹಿರಿಯ ಹೋರಾಟಗಾರ ಡಾ.ಲಕ್ಷ್ಮಣ ದಸ್ತಿ ಮಾತನಾಡಿ ದೈನಂದಿನ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ಆಹಾರ ಜೊತೆ ದೈಹಿಕ ಪರಿಶ್ರಮವು ಅಗತ್ಯವಾಗಿದೆ.ರಕ್ತ ಚಲನೆಯಲ್ಲಿ ಫಿಜೀಯೋ ಥೆರಪಿ ಪಾತ್ರ ಮುಖ್ಯವಾಗಿದೆ.ಟ್ರಸ್ಟ್ ವತಿಯಿಂದ ಇಲ್ಲಿವರೆಗೆ ಅನೇಕ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, ಶ್ಲಾಘನೀಯವಾಗಿದೆ ಎಂದರು.

ಉಪಾಧ್ಯಕ್ಷ ವಿರೇಶ ದಂಡೋತಿ ವೇದಿಕೆ ಮೇಲೆ ಇದ್ದರು.
ಕಂಪಾನಿಯೋ ಮುಖ್ಯಸ್ಥರಾದ ನಾಗೇಂದ್ರ ವಿವರಣೆ ನೀಡಿದರು.ಕೌಶಿಕ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ,ಕೋಶಾಧ್ಯಕ್ಷ ಬಸವರಾಜ ಮಾಗಿ,ಕಾರ್ಯದರ್ಶಿ ಶಿವಕುಮಾರ ಪಾಟೀಲ,ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ,ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ,ಹಿರಿಯ ಸದಸ್ಯರಾದ ಎಂ.ಡಿ ಮಠಪತಿ,ನಾಗರಾಜ ಖೂಬಾ,ವಾಸುದೇವ ಮಾಲಿಬೀರಾದರ,ಸುನೀಲ ಬೀಡಪ್,ಬಸವರಾಜ ಪುರ್ಮಾ,ಮಲ್ಲಯ ಸ್ವಾಮಿ ಗಂಗಾಧರಮಠ.ಚಂದ್ರಕಾಂತ ತುಪ್ಪದ,ಮಹಿಳಾ ಸದಸ್ಯರಾದ ಶೈಲಜಾ ವಾಲಿ,ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ,ಅನಿತಾ ನವಣಿ, ಲತಾ ತುಪ್ಪದ, ಗೀತಾ ಸಿರಗಾಪೂರ ಸೇರಿದಂತೆ ಬೆರೆ ಬಡಾವಣೆಯ‌ ಹಿರಿಯರು.ಮಹಿಳೆಯರು ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here