ಬೇಗುಸರಾಯದಲ್ಲಿ ಲಾಲ್ ಸಲಾಂ ಕಹಳೆ, ಪಕ್ಷ ಭೇಧ ಮರೆತು ಪ್ರಚಾರಕ್ಕೆ ಆಗಮಿಸುತ್ತಿರುವ ಚಿತ್ರ ನಟರು ಹಾಗೂ ಇತರೆ ಪಕ್ಷದ ಗಣ್ಯರು

0
246

ಬೇಗುಸರಾಯ: ದೇಶದಲ್ಲಿ ಒಬ್ನ ಸುಪುತ್ರ ಇದ್ದಾನೆ ಇನ್ನೊಬ್ಬ ಕುಪುತ್ರ ಇದ್ದಾನೆಂದು ಬಹುಭಾಷೆ ನಟ ಪ್ರಕಾಶ ರಾಜ ಅವರು ತಮ್ಮ ಅಭಿಪ್ರಯ ವ್ಯಕ್ತಪಡಿಸಿದರು. ಅವರು ಬೆಗೂಸರಾಯ ಲೋಕ ಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ, ಚಿತ್ರ ಜಗತ್ತಿಗೆ ಬರುವ ಮುಂಚೆ ನನ್ನ ಹತ್ತಿರ ಕೇವಲ 120 ರೂ ಇತ್ತು. ಆಯಾ ಭಾಷೆಯ ಜನರು ನನ್ನ ಸಿನಿಮಾಗಳು ಹಣ ಕೊಟ್ಟು ನೋಡಿರುವುದರಿಂದ ನನ್ನ ಹತ್ತಿರ ಇಗ ಕೋಟಿ ಗಟ್ಟಲ್ಲೆ ಹಣವಿದೆ. ಈ ಹಣ ನನ್ನಗೆ ಎಲ್ಲಾ ಜನರು ನೀಡಿ ನನ್ನಗೆ ಬೇಳಸಿದ್ದು, ಆದರೆ ನನ್ನ ಜನರು ಸಂಕಷ್ಟದಲ್ಲಿ ಇದಾಗ ನಾನು ಹೇಗೆ ಸುಮ್ಮನೆ ಕುಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಗೆ ಕಾರಣ ಕರ್ತನಾದ ಚೌಕಿದಾರ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.

Contact Your\'s Advertisement; 9902492681

ಅವರು ಮಾತನಾಡುತ, ನನ್ನಗೆ ಕನ್ಹಯ್ಯ ಕುಮಾರ ಜೊತೆ ಯಾವುದೇ ರಕ್ತ ಸಂಬಂಧ ವಿಲ್ಲ ಆದರೂ ನಾನು ಇಲಿ ನಿಮ್ಮ ಮತ್ತು ಕನ್ಹಯ್ಯ ಕುಮಾರ ಜೊತೆ ನಿಂತಿದೇನೆ. ಎಕೆಂದರೆ ಕನ್ಹಯ್ಯ ಕುಮಾರ ನನ್ನಗಿಂತ ಚಿಕ್ಕವನ್ನು ಆದರೆ ಅವನಲ್ಲಿ ಇರುವ ವಿಚಾರಗಳು ಬಡವರ, ರೈತರು, ದಲಿತರ ಕುರಿತು ಇರವ ಕಾಳಜಿ, ಕಳಕಳ ದೊಡ್ಡದು ನನಗೆ ಇಲ್ಲಿಕರೆಸಿದೆ ಎಂದು ಹೇಳಿದ್ದರು.

ನಾನು ಕೂಡ ಚೌಕಿದಾರ ವಿರುದ್ಧ ಬೆಂಗಳೂರುನಲ್ಲಿ ಚುನಾವಣೆ ಎದುರಿಸುತ್ತಿದೇನೆ. ನನಗೆ ದೇವರು ನನಗೆ ಯಾರ ಗೆಲುವು ಮುಖ್ಯ ಎಂದು ಕೇಳಿದಾಗ ನಾನು ದೇವರಲ್ಲಿ ಕನ್ಹಯ್ಯ ಕುಮಾರ ಗೆಲುವು ನನ್ನಗೆ ಮುಖ್ಯ ನಾನು ಸೋತ್ತಿದ್ದರು ಪರವಾಗಿಲ್ಲ ಎಂದು ದೇವರಲ್ಲಿ ಕೇಳಿಕೊಳುತ್ತೇನೆ ಎಂದು ಅವರು ತಮ್ಮ ಆಶಯವನ್ನು ವ್ಯಕ್ತಿಪಡಿಸಿದ್ದರು.

ಇದೇ ಸಂದರ್ಭದಲ್ಲಿ ನಟಿ, ರಾಜ್ಯ ಸಭಾ ಸದಸ್ಯ ಶಬಾನಾ ಆಜ್ಮಿ ಹಾಗೂ ಗುಜರಾತನ ಶಾಸಕ ಜೀಗ್ನೆಶ್ ಮೇಹವಾನಿ, ಶಯಲಾ ರಶೀದ್ ಸೇರಿದಂತೆ ಮುಂತಾದವರು ಗಣ್ಯರು ಇದ್ದರು.

ಈ ಹಿಂದೆ ಜಾವಿದ್ ಅಕ್ತರ ಅವರು ಬೇಗುಸರಾಯದಲ್ಲಿ ಕನ್ಹಯ್ಯ ಪರ ಚುನಾವಣೆ ಪ್ರಚಾರ ನಡೆಸಿ ಮತ ಯಾಚಿಸಿದರು.

ಬೇಗುಸರಾಯ ಲೋಕಸಭಾ ಕ್ಷೇತ್ರದಲ್ಲಿ ಸಿ.ಪಿ.ಐ ಪಕ್ಷದಿಂದ ಕನ್ಹಯ್ಯ ಕುಮಾರ, ಬಿಜೆಪಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಗ್, ಆರ್.ಜೆ.ಡಿ ಪಕ್ಷದಿಂದ ತನವೀರ್ ಹಸನ್ ಸ್ಪರ್ಧಿಸುತ್ತಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here