Saturday, July 13, 2024
ಮನೆಬಿಸಿ ಬಿಸಿ ಸುದ್ದಿಯುವಕನ ನಿಂದ ಗುಂಡಿನ ಧಾಳಿ ಪ್ರಕರಣ: ಎಐಡಿಎಸ್ಓ ಸಂಘಟನೆ ಖಂಡನೆ

ಯುವಕನ ನಿಂದ ಗುಂಡಿನ ಧಾಳಿ ಪ್ರಕರಣ: ಎಐಡಿಎಸ್ಓ ಸಂಘಟನೆ ಖಂಡನೆ

ಕಲಬುರಗಿ: ದೆಹಲಿಯ ಜಾಮಿಯಾ ಇಸ್ಲಾಮಿಯಾ ಹತ್ತಿರ ದುಷ್ಕರ್ಮಿಯೊಬ್ಬ ಪ್ರತಿಭಟನಾಕಾರರ ಮೇಲೆ ಗುಂಡು ಹರಿಸಿದ್ದಕ್ಕೆ ಘಟನೆಯನ್ನು ಎಐಡಿಎಸ್ಓ ತವ್ರವಾಗಿ ಖಂಡಿಸಿದೆ

ಪತ್ರಿಕಾ ಪ್ರಕಟಣೆ ನೀಡಿದ ಜಿಲ್ಲಾ ಸಮಿತಿ ಸಿಎಎ ಪರ ದುಷ್ಕರ್ಮಿಯು ಜಾಮಿಯಾ ಮಿಲಿಯಾ ಇಸ್ಲಾಮಿಯಾ ದ ಹತ್ತಿರ ರಾಜ್ಘಾಟ್ ಕಡೆಗೆ ತೆರಳುತ್ತಿದ್ದ ಮೆರವಣಿಗೆಯತ್ತ ಗುಂಡು ಹಾರಿಸಿದ್ದು ಮಿತಿಮೀರಿದ ದುಷ್ಕೃತ್ಯವಾಗಿದೆ. ಈ ದುರ್ಘಟನೆಯ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ರಕ್ಷಿಸದೆ ಮೂಕ ಪ್ರೇಕ್ಷಕರಾಗಿ ನಿಂತದ್ದು ಪೊಲೀಸರು- ಆರಎಸ್ಎಸ್ ಗುಂಡಾಗಳು -ಬಿಜೆಪಿ ಮಿಶ್ರಣದ ಕೈವಾಡವನ್ನು ಸಾಬೀತುಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ನಾಯಕರುಗಳು ‘ದೇಶ ಕೆ ಗದ್ಧಾರೋಂ ಕೊ, ಗೋಲಿ ಮಾರೋ…(ದೇಶದ್ರೋಹಿಗಳನ್ನು, ಗುಂಡಿಕ್ಕಿ….) ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದಾರೆ ತಮ್ಮ ಹಿಂಬಾಲಕರನ್ನು ಕಳುಹಿಸಿ ಈ ವಿಚಾರಗಳನ್ನು ಕಾರ್ಯರೂಪಕ್ಕಿಳಿಸುತ್ತಿದ್ದಾರೆ ಎಂದು ಸಮಿತಿಯ ಜಿಲ್ಲಾ ಮುಖಂಡರಾದ ಹಣಮಂತ ಎಸ್. ಹೆಚ್ ಆರೋಪಿಸಿದ್ದಾರೆ.

ಆರ್.ಎಸ್.ಎಸ್ ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರ ಹತ್ಯೆ ಗೈದಿದ್ದನ್ನು ನೆನಪಿಸಿಕೊಳ್ಳಬಹುದು. ಈ ದಾಳಿಯು ಕೂಡ ಆರೆಸ್ಸೆಸ್ ನ ಅದೇ ಅಸಹಿಷ್ಣು ಗುಣಲಕ್ಷಣ ಮತ್ತು ಕೋಮುವಾದಿ ದಾಳಿಯ ಮುಂದುವರಿಕೆಯಾಗಿದ್ದು, ಪ್ರಜಾತಾಂತ್ರಿಕ ಹೋರಾಟಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸುತ್ತದೆ.

ದುಷ್ಕರ್ಮಿ ಹಾಗೂ ಪೊಲೀಸರಿಗೆ ಉಗ್ರ ಶಿಕ್ಷೆ ವಿಧಿಸಲು ಆಗ್ರಹಿಸಿ. ಕೋಮುವಾದಿ ಮತ್ತು ಒಡೆದಾಳುವ ರಾಜಕೀಯ ಹಾಗೂ ಜನತೆಯ ಸಮಸ್ಯೆಗಳ ವಿರುದ್ಧ ಧೀರೋದ್ಧಾತ ಹೋರಾಟವನ್ನು ಮುನ್ನಡೆಸಲು ಹಾಗೂ ಕಣ್ಣಿನ ಗುಡ್ಡೆ ಯಂತೆ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಜನತೆಯಲ್ಲಿ ಈರಣ್ಣ ಇಸಬಾ ಮನವಿ ಮಾಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular