ಕಲಬುರಗಿ: ನಗರದ ಸರ್.ಎಮ್.ವಿಶ್ವೇಶ್ವರಯ್ಯ ಭವನದಲ್ಲಿ ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನಿವೃತ್ತ ನೌಕರರ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ೭೫ ವಯೋಮಿತಿ ಹೊಂದಿದ ಸಂಘದ ನಿವೃತ್ತ ಸದಸ್ಯರಿಗೆ ಸನ್ಮಾನಿಸಲಾಯಿತು. ಮಾಜಿ ಸಚಿವ ರೇವೂನಾಯಕ ಬೆಳಮಗಿ, ಸುಭಾಷ ರಾಠೋಡ, ವಿಠ್ಠಲ್ ಜಾಧವ್, ರವಿ ರಾಠೋಡ, ಬಿ.ಬಿ.ನಾಯಕ್, ತಾರಾನಾಥ ಚವ್ಹಾಣ, ಪಿ.ಬಿ.ರಾಠೋಡೆ, ಧೇನುಸಿಂಗ್ ಚವ್ಹಾಣ, ಎಸ್.ಎಸ್.ಪವಾರ, ಹೊಬಸಿಂಗ್ ಚವ್ಹಾಣ, ರಾಮಚಂದ್ರ ಜಾಧವ್ ಹಾಗೂ ಇತರರಿದ್ದರು.