ಕಲಬುರಗಿ: ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಗರದ ಅಕ್ಕ ಮಹಾದೇವಿ ಕಾಲೋನಿಯ ಸ್ನೇಹ ಸಂಗಮ ಸೇವಾ ಸಂಘದ ವತಿಯಿಂದ ಬಡವರಿಗೆ ವಿತರಿಸಲು ೮ ಕ್ವಿಂಟಾಲ್ ಅಕ್ಕಿ ಮತ್ತು ೨ ಕ್ವಿಂಟಾಲ್ ತೋಗರಿ ಬೆಳೆ ಪಾಕೀಟ್ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾರ್ಯದರ್ಶಿ ಮಹಾಂತೇಶ ಪಾಟೀಲ, ಚಂದ್ರಪ್ಪ ಮಾಸ್ಟರ್, ದೇವೀಂದ್ರಪ್ಪ ಮರತೂರ, ಲಕ್ಷ್ಮಪುತ್ರ ಜಮಾದಾರ, ಪ್ರಭುಲಿಂಗ ಗೊಬ್ಬರ, ಹುಲ್ಲಕಂಠರಾಯ ಅರಳಗುಂಡಗಿ, ಮಲ್ಲಿಕಾರ್ಜುನ ಅಜಗೂಂಡ, ಮಹಾಂತಗೌಡ ಪಾಟೀಲ, ತುಕರಾಮ ಪಾಟೀಲ, ಶ್ರೀಶೈಲ ಭೋಳರಗಿ, ದೇವೀಂದ್ರಪ್ಪ ಜಮಾದಾರ, ಗಜೇಂದ್ರ ಗುತ್ತೇದಾರ, ಮಲ್ಲಿಕಾರ್ಜುನ ದುತ್ತರಗಾಂವ, ಬಿ.ಎಂ.ಪಾಟೀಲ ಕಲ್ಲೂರ, ಮೊದಿನ ಪಟೇಲ್, ಫೈಯುಮ್ ಸಾಹೇಬ ನಂದೂರ ಇದ್ದರು.