ಬೀದರ್: ಇಲ್ಲಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಇಂದು ಜಗನ್ಮಾತೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು.
ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣ, ಡಾ. ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ತೊಟ್ಟಿಲೋತ್ಸವ ಕೂಡ ನೆರವೇರಿಸಲಾಯಿತು.
ಜಗಕ್ಕಂಟಿದ ಕೆರೊನಾ ನಿವಾರಣೆಗೆ ಸೃಷ್ಟಿಯೇ ಕೂಡಲೇ ಪರಿಹಾರ ಸೂಚಿಸುವಂತಾಗಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ಪೂಜ್ಯ ಶ್ರೀ ಪ್ರಭು ದೇವರು ಇತರರು ಇದ್ದರು.