ಜೇವರ್ಗಿ: ಬುಧವಾರ ದವನದ ಹುಣ್ಣಿಮೆಯಂದು ವಿಶ್ವದ ಮೊದಲ ಕವಯತ್ರಿ, ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರ ಜಯಂತ್ಯುತ್ಸವ ಬಸವ ಕೇಂದ್ರದಲ್ಲಿ
ಸರಳವಾಗಿ ಆಚರಿಸಲಾಯಿತು.
ಈ ವೇಳೆಯಲ್ಲಿ ಮಹಿಳಾ ಘಟಕದ ಗೌರವಾಧ್ಯಕ್ಷ ರಾದ ಮಹಾನಂದ ಷ, ಹಿರೆಗೌಡ, ಅದ್ಯಕ್ಷರಾದ ರಾಜೇಶ್ವರಿ, ವಿಜಯಕುಮಾರ ಪಾಟೀಲ ಸೇಡಂ, ಸದಸ್ಯರಾದ ಮಾಣಿಕಮ್ಮ ಕಲ್ಲಾ, ನಾಗಮ್ಮ ಬಿಳವಾರ, ಗಂಗಮ್ಮಾಯಿ ಹಿಪ್ಪರಗಿ, ಬಸಮ್ಮ ಬಿರೆದಾರ, ಬಾಗ್ಯಜೋತಿ ಪಾಟೀಲ, ಲಕ್ಷ್ಮೀ ಬಂಟನೂರ, ಜೋತಿ ವಾರದ, ಗೀತಾ ಹಿರೆಗೌಡ, ಶಿವಲೀಲಾ ಹಿರೆಗೌಡ ಇದ್ದರು.
ಈ ಸಂದರ್ಭದಲ್ಲಿ ಅಕ್ಕಾ ಮಹಾದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಮತ್ತು ಅಕ್ಕನ ವಚನಗಳನ್ನು, ಯೋಗಾಂಗ ತ್ರಿವಿಧಿಗಳನ್ನು ಪಠಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿದರು.
ದೇಶಕ್ಕೆ ಬಂದ ಕರೂನ ಗಂಡಂತರದ ಹೆಮ್ಮಾರಿಯಿಂದ ದೇಶವನ್ನು ಪಾರು ಮಾಡಲು ದೇವರಲ್ಲಿ ಎಲ್ಲರೂ ಪ್ರಾರ್ಥಿಸಿದರು .