ಅಕಾಲಿಕ ಮಳೆಗೆ ಮನೆಗಳ ತಗಡು ಹಾರಿಹೋಗಿ ಅಪಾರ ನಷ್ಟ

0
16

ಸುರಪುರ: ಸೊಮವಾರ ರಾತ್ರಿ ಸುರಿದ ಅಕಾಲಿಕ ಮಳೆ ಗಾಳಿಗೆ ನಗರದ ಹಸನಾಪುರ ಬಳಿಯ ರಾಜಾ ಕುಮಾರ ನಾಯಕ ಕಾಲೋನಿಯಲ್ಲಿನ ಮನೆಗಳ ಚಾವಣಿಯ ತಗಡುಗಳು ಹಾರಿಹೋಗಿ ಅಪಾರ ಪ್ರಮಾಣದ ನಷ್ಟವುಂಟಾಗಿರುವ ಘಟನೆ ನಡೆದಿದೆ.

ಶಾಂತಮ್ಮ ರಾಮಣ್ಣ ಮ್ಯಾಕಲ್ ಹಾಗು ಆಶಪ್ಪ ಯಾದವ್ ಎಂಬುವವರ ಮನೆಗಳ ಚಾವಣಿಯ ತಗಡುಗಳು ಹಾರಿ ಹೋಗಿದ್ದರಿಂದ ಮನೆಯಲ್ಲಿದ್ದ ಟಿವಿ ಕಂಪ್ಯೂಟರ್ ಹಾಗು ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಧವಸ ದಾನ್ಯಗಳು ಹಾಗು ಬಟ್ಟೆ ಬರೆಗಳು ಸೇರಿದಂತೆ ಲಕ್ಷಾಂತರ ರೂಪಾಯಿಗಳ ವಸ್ತುಗಳು ನಾಶವಾಗಿವೆ.

Contact Your\'s Advertisement; 9902492681

ಶಾಂತಮ್ಮ ಮ್ಯಾಕಲ್ ಅವರ ಮನೆಯಲ್ಲಿ ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಿರುವುದರಿಂದ ಅನೇಕರು ರಿಪೇರಿಗೆಂದು ತಂದಿದ್ದ ಕಂಪ್ಯೂಟರ್ ಲ್ಯಾಪಟಾಪ್ ವಸ್ತುಗಳು ಮಳೆಯ ನೀರಿಂದ ಹಾನಿಯಾಗಿವೆ ಎಂದು ಮಂಜುನಾಥ ಮ್ಯಾಕಲ್ ತಮ್ಮ ನೋವು ತೋಡಿಕೊಂಡಿದ್ದಾರೆ.

ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದ್ದರಿಂದ ಬಡವರಾದ ನಾವು ಏನು ಮಾಡುವುದೆಂದು ತೋಚದಾಗಿದೆ.ಸರಕಾರ ನಮ್ಮ ನೆರವಿಗೆ ಬರಬೇಕೆಂದು ವಿನಂತಿಸಿದ್ದಾರೆ.ಹಾನಿಗೀಡಾದ ಮನೆಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಕುರಿತು ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here