ಸಾವರ್ಕರ್ ರವರ 137ನೇ ಜನ್ಮ ಜಯಂತಿ ಅದ್ದೂರಿ ಆಚರಣೆ

2
92

ಕಲಬುರಗಿ: ಸ್ವಾತಂತ್ರ ಹೋರಾಟಗಾರ, ತ್ಯಾಗವೀರ, ವಿನಾಯಕ. ದಾ. ಸಾವರ್ಕರ್ ರವರ 137ನೇ ಜನ್ಮ ಜಯಂತಿ ಅದ್ದೂರಿ ಆಚರಣೆ. ಗುರುವಾರ ಸಂಜೆ 5.30 ಗಂಟೆ, ಸ್ಥಳ: ಶ್ರೀ. ಚಂದ್ರಶೇಖರ್ ಅಜಾದ್ ವೃತ, ಬ್ರಹ್ಮಪೂರ್ ನಲ್ಲಿ, ಅಜಾದ್ ತರುಣ ಸಂಘದ ಅಧ್ಯಕ್ಷ ಶ್ರೀ. ಕವಿರಾಜ್ ಕೋರಿ ಯವರ ನೇತೃತ್ವದಲ್ಲಿ ಅದ್ದೂರಿಯಾಗಿ ಅಚರಿಸಲಾಯತು. ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಶ್ರೀ. ಜೇ. ವಿನೋದಕುಮಾರ ಎಸ್. ನೆರವೇರಿಸಿದರು. ಮೊದಲಿಗೆ, ಚಿ. ಶರಣ ಪ್ರಸಾದ್ ಜೇನವೇರಿ ಸ್ವಾಗತಿಸಿದರು, ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ. ಈರಯ್ಯ ಸ್ವಾಮಿ ಭಂದರವಾಡ್ ಈಗಿನ ಯುವಕರಲ್ಲಿ ದೇಶಭಕ್ತಿ ಕಡಿಮೆಯಾಗುತ್ತದೆ, ಇಂತಹ ಮಹಾ ದೇಶಭಕ್ತರ ಜಯಂತಿ ಹಾಗೂ ಸ್ಮರಣೆ ಮಾಡುವದು ಬಹಳ ಉತ್ತಮ ಕಾರ್ಯ ಈ ತರುಣ ಸಂಘ ಮಾಡುತ್ತಿರಿರುವ ಕಾರ್ಯಕ್ರಮದಲ್ಲಿ ನನ್ನ ಅಭಿಪ್ರಾಯಗಳನ್ನು ಹೇಳಲು ಅವಕಾಶ ಕಲ್ಪಿಸಿದಕ್ಕೆ ಧನ್ಯವಾದಗಳು ಎಂದರು. ಕವಿರಾಜ್ ಕೋರಿ ನಿರೂಪಿಸಿದರು. ಕೊನೆಯಲ್ಲಿ ಕುಮಾರಿ. ಮಹಾಲಕ್ಷ್ಮಿ ಕೋರಿ ವಂದಿಸಿದಳು. ಇದೆ ಸಂದರ್ಭದಲ್ಲಿ ತ್ಯಾಗಜೀವಿ ಶ್ರೀ. ಶರಣಪ್ಪ ಸಾಹುಕಾರ ಕಲಗುರ್ತಿ ಯವರನ್ನು ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ವಚನೋತ್ಸವ ಸಮಿತಿಯ ಅಧ್ಯಕ್ಷ ರಾದ ಶ್ರೀ. ಶಿವರಾಜ ಅಂಡಗಿ ಇದ್ದರು.

 

Contact Your\'s Advertisement; 9902492681

2 ಕಾಮೆಂಟ್ಗಳನ್ನು

  1. ದೇಶಕ್ಕಾಗಿ ಪ್ರಾಣವನ್ನು ಅರ್ಪಣೆ ಮಾಡಿದ ವಿನಾಯಕ ದಾಮೋದರ ಸಾವರ್ಕರ್ ಅವರ ನೆನಪು ಮಾಡಿಕೊಟ್ಟಿದ್ದೀರಿ ನಿಮಗೆ ಅಭಿನಂದನೆಗಳು. ನ್ಯಾಯವಾದಿ ವಿನೋದ್ ಕುಮಾರ್ ಅವರಿಗೆ ಅಭಿನಂದನೆಗಳು ವಿನಾಯಕ ದಾಮೋದರ ಸಾವರ್ಕರ್ ಅವರ ಸಂತತಿ ಬೆಳೆಯಲಿ ಅವರ ನೆನಪು ಮಾಡಿಕೊಟ್ಟ ನಿಮಗೆ ಅನಂತ ಅನಂತ ವಂದನೆಗಳು.
    ಭಾರತ ದೇಶಕ್ಕಾಗಿ ಹದಿನಾಲ್ಕು ವರ್ಷಗಳ ಕಾಲ ಅಂಡಮಾನಿನ ಜೈಲಿನಲ್ಲಿ ಇದು ದೇಶವನ್ನು ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಎಂದು ಮಾಡಿದ ಮಹಾನ್ ದೇಶಭಕ್ತ ಕ್ರಾಂತಿಕಾರಿ ಅವರ ನೆನಪು ನಾವು ಮಾಡಿಕೊಳ್ಳುತ್ತಿರುವುದು ಬಹಳ ಸಂತೋಷವನ್ನುಂಟುಮಾಡಿದೆ
    ಶ್ರೀ ವಿನೋದ್ ಕುಮಾರ್ ಜನವರಿ ಯವರೇ ನಿಮ್ಮ ಒಂದು ಹೋರಾಟದ ಸಭಾವ ಹೀಗೆ ಮುಂದುವರೆಯಲಿ ಸಮಾಜದಲ್ಲಿ ಇರತಕ್ಕಂತ ಮೇಲು-ಕೀಳು ಅಸಮಾನತೆ ಹೋಗಲಾಡಿಸಿ ಒಂದು ದಿಟ್ಟವಾದ ಹೆಜ್ಜೆಯನ್ನು ನೀಡುತ್ತೀರಿ ಎಂದು ನಂಬಿದ್ದೇನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here