ಮಿಣಜಗಿಯವರಿಗೆ ವಯೋನಿವೃತ್ತಿ: ಸಮಾಜದ ಸನ್ಮಾನ

0
170

ಕಲಬುರಗಿ: ಇಂದು ಶ್ರೀ. ಗುರುಲಿಂಗಪ್ಪ ಎಸ್. ಮಿಣಜಗಿ ಯವರು ( ಮೂಲ ರುಕ್ಮಪುರ್ ಗ್ರಾಮ) ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯಿಂದ ನಿವೃತ್ತಿ ಯಾಗುತ್ತಿರುವ ದರಿಂದ ಅವರನ್ನು ಅವರ ಕಚೇರಿಗೆ ತೆರಳಿ ಅತಿ ಹೆಮ್ಮೆಯಿಂದ ಸಮಾಜದ ವತಿಯಿಂದ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು.

ರಾಜ್ಯ ಹಟಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೇನವೇರಿ ಹಾಗೂ ರಾಜ್ಯ ಹಟಗಾರ ವಕೀಲರ ಸಂಘದ ಸಂಚಾಲಕರು ಮತ್ತು ಹಿರಿಯ ವಕೀಲರಾದ ಶ್ರೀ. ಶಿವಲಿಂಗಪ್ಪ ಅಷ್ಟಗಿ, ಛಾಯಾಗ್ರಾಹಕ ರಾಜು ಕೋಸ್ಟಿ, ನ್ಯಾಯವಾದಿಗಳಾದ ಶ್ರೀ. ಚಂದ್ರಕಾಂತ ಮಾಲಗತ್ತಿ, ಶ್ರೀ. ಮನೋಹರ್ ಇತರರು ಇದ್ದರು. ಮೊದಲಿಗೆ ಶ್ರೀ. ಗುರುಲಿಂಗಪ್ಪ ಮಿಣಜಗಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಇನ್ನು ಮುಂದೆ ಸಾಮಾಜಿಕ ಜೀವನದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಧರ್ಮಗುರು ದಾಸಿಮಯ್ಯನ ವರ ಕೃಪೆ ಬಯಸುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು. ಗುಲ್ಬರ್ಗಾ ಹಟಗಾರ ಸಂಘದ ಕಾನೂನು ಸಲಹೆಗಾರ ಕಲಪ್ಪ ಸಕರಿ ಯವರು ಶರಣುಗೈದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here