ಕಲಬುರಗಿ: ಹೊರವಲಯದ ಹುಮನಾಬಾದ ರಸ್ತೆಯಲ್ಲಿರುವ ಕಪನೂರನಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ ಶಿವಕುಮಾರ ಹಾಗೂ ರಾಜ್ಯಸಭೆ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ ಚಿತ್ರಕ್ಕೆ ಮಾಜಿ ಪಾಲಿಕೆ ಸದಸ್ಯ ರಾಜಕುಮಾರ ಎಚ್. ಕಪನೂರ ನೇತೃತ್ವದಲ್ಲಿ ಹಾಲಿನ ಅಭಿಷೇಕ ಹಾಗೂ ಹೂವಿನ ಹಾರ ಹಾಕಲಾಯಿತು. ಉತ್ತರ ವಲಯ ಕಾಂಗ್ರೆಸ್ ಉಸ್ತುವಾರಿ ಆನಂದ ದೇವಪ್ಪ, ಬಕ್ಕಪ್ಪ ಕೋಟೆ, ಶರಣು ಗೋದಿ, ಸಂದೀಪ್ ಬೋವೆ, ಆದಿಲ್ ಸುಲೇಮನ್ ಸೇಠ, ಫಾರೂಕ್ ಸೇಠ್, ಭೀಮಶ ಜೀವಣಗಿ, ಮೊಯಿನ್ ಖಾನ್ ಪಠಾಣ್, ವಿನೋದ ಖೆರೋಜಿ ಇದ್ದರು.