ಶಹಾಬಾದ:ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಯೋಜನೆ ಮುಂದುವರೆಸಬೇಕು ಮತ್ತು ಉದ್ಯೋಗದಲ್ಲಿ ತಾತ್ಕಾಲಿವಾಗಿ ತಡೆ ಹಿಡಿಯಲಾದ ಖಾಲಿ ಹುದ್ದೆಗಳನ್ನು ತುಂಬಬೇಕು ಸೇರಿದಮತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ನಗರದ ಜೆಡಿಎಸ್ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ಹಿಂದಿನಿಂದಲೂ ಅನ್ಯಾವಾಗುತ್ತ ಬಂದಿದ್ದು, ಈಗ ಮತ್ತೆ ಈ ಭಾಗದ ಅಭಿವೃದ್ಧಿ ಯೋಜನೆ, ನೇಮಕಾತಿಗಳನ್ನು ತಡೆ ಹಿಡಿದು ಈ ಭಾಗದ ಜನರಿಗೆ ಅನ್ಯಾಮಾಡಿದಂತಾಗಿದೆ.ಆದ್ದರಿಂದ ಕೂಡಲೇ ಖಾಲಿ ಹುದ್ದೆಗಳನ್ನು ತುಂಬಬೇಕು. ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭ ಮಾಡಬೇಕು.ಅಲ್ಲದೇ ರಾಜ್ಯ ಪೊಲೀಸ್ ಇಲಾಖೆಯ ಎಸ್ಐ ನೇಮಕಾತಿಯಲ್ಲಿ ಮೀಸಲಾತಿಯನ್ನು ಪರಿಗಣಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ರೇಲ್ವೆ ವಲಯ ಸ್ತಾಪನೆಯಾಗಬೇಕು. ಕೆಕೆಆರ್ ಡಿಬಿ ಅನುದಾನ ಒದಗಿಸಬೇಕು. ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ನೇಮಕ ಮಾಡಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಉಪತ್ಹಸೀಲ್ದಾರ ಮಲ್ಲಿಕಾರ್ಜುನ್ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜೆಡಿಎಸ್ ಘಟಕದ ಅಧ್ಯಕ್ಷ ರಾಜಮಹ್ಮದ್ ರಾಜಾ, ಲೋಹಿತ್ ಕಟ್ಟಿ, ಬಸವರಾಜ ಮಯೂರ, ಸುನೀಲ ಚವ್ಹಾಣ, ಅಬ್ದುಲ್ ಜಬ್ಬಾರ್, ಅಬ್ದುಲ್ ರಶೀದ್, ಹೀರಾ ಪವಾರ, ಬಸವರಾಜ ದಂಡಗುಲಕರ್,ಪ್ರವೀಣ ರಾಮಕೋಟೆ, ಹನುಮಾನ ಕಾಂಬಳೆ,ನಬೀ ಪಟೇಲ್ ಇತರರು ಇದ್ದರು.