ಯಡ್ರಾಮಿಯಲ್ಲಿ ದಲಿತರ ಮದುವೆ ಮೆರವಣಿಗೆ ಅಡ್ಡಿ: ಸವರ್ಣೀಯರಿಂದ ಹಲ್ಲೆ

0
1239

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ  ನಾಗರಹಳ್ಳಿ ಗ್ರಾಮದಲ್ಲಿ ರವಿವಾರ ರಾತ್ರಿ ದಲಿತರು ಮದುವೆ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಏಕಾಏಕಿ ದಲಿತರ  ಮೇಲೆ ಸವರ್ಣಿಯರು ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ.

Contact Your\'s Advertisement; 9902492681

ಗ್ರಾಮದಲ್ಲಿ ಸವರ್ಣೀಯರು ಮಹಿಳೆಯರು ಮಕ್ಕಳೆನ್ನದೇ ಮನಸೋ ಇಚ್ಚೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮದುವೆಯಾದ ದಲಿತರು ಗ್ರಾಮದಲ್ಲಿ ಪ್ರವೇಶಿಸಬಾರದು ಮತ್ತು ಮೆರವಣಿಗೆ ಮಾಡಬಾರದು ಎಂದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಸ್ಥಳಕ್ಕೆ ರಕ್ಷಣೆಗೆ ಬಂದ ಪೋಲಿಸರ ಮೇಲು ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಮಹಿಳೆ ಮಕ್ಕಳೆನ್ನದೆ ಹಿರಿಯ ಜೀವಗಳ ಮೇಲೆ ಮನಬಂದಂತೆ ಕಲ್ಲುˌಕಟ್ಟಿಗೆಗಳಿಂದ ಹೊಡೆದು ಕ್ರೂರವಾಗಿ ನಡೆದ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳು ಸ್ಥಳೀಯ ಜೇವರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಸಂಪೂರ್ಣ ಬಿಗುವಿನ ವಾತಾವರಣವಿದ್ದುˌ ಹೆಚ್ಚಿನ ಪೊಲೀಸ್ ಬಂದೋಬಸ್ತ ಒದಗಿಸಲಾಗಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here