ಕಲಬುರಗಿಯಲ್ಲಿ ದಲಿತ ಯುವಕನಿಗೆ ಮರಕ್ಕೆ ಕಟ್ಟಿಹಾಕಿ ಥಳಿತ

0
861

ಕಲಬುರಗಿ: ಜಿಲ್ಲೆಯ ಮಹಾಗಾಂವ ತಡಕಲ್ ತಾಂಡದಲ್ಲಿ ದಲಿತ ಯುವಕನ್ನು ಮರಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಅನಿಲ್ ಕುಮಾರ  ತಂದೆ ಚಂದ್ರಶಾ (24) ಹಲ್ಲೆಗೆ ಒಳಗಾದ ಯುವಕ, ಚಿತ್ತಾಪುರ ತಾಲೂಕು ವಟವಟಿ ಗ್ರಾಮ ನಿವಾಸಿಯಾಗಿದ್ದ ಅನಿಲ್ ಅರಣಕಲ್ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಸುತ್ತಿದ್ದ ಎನ್ನಲಾಗಿದ್ದು, ತಡಕಲ್ ತಾಂಡಾದಲ್ಲಿ ಹಲ್ಲೆ ನಡೆಸಲಾಗಿದೆ.

Contact Your\'s Advertisement; 9902492681

ಅನಿಲ್ ಕಳೆದ ರಾತ್ರಿ ತಡಕಲ್ ತಾಂಡಕ್ಕೆ ಪ್ರಿಯತಮೆಗೆ ಭೇಟಿ ನೀಡಲು ತೆರಳಿದಾಗ ಯುವತಿಯ ಕುಟುಂಬಸ್ಥರು ಯುವಕ ಅನಿಲನ್ನು ಮರಕ್ಕೆ ಕಟ್ಟಿಹಾಕಿ ಮರಣಾಂತಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದ್ದು, ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ: ಅನಿಲ್ ಹಾಗೂ ತಡಕಲ್ ತಾಂಡದ ಯುವತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಲಹ ನಡೆದಿತ್ತು. ಮಹಾಗಾಂವ ಪೊಲೀಸರು ಅನಿಲ್ ಗೆ ವಾರನಿಂಗ್ ಕುಡ ನೀಡಿದರು ಎನ್ನಲಾಗಿದೆ.

ಆದರೆ ಅನಿಲ್ ಅವರ ಅವರ ಅಣ್ಣ ಭಾಸ್ಕರ್ ಅವರು ಇ ಮೀಡಿಯಾ ಲೈನ್ ಜೊತೆ ಮಾತನಾಡಿ, ಅನಿಲ್ ಲೋಕ ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿರುವುದರಿಂದ ಅನಿಲ್ ಗೆ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆಂದು ಆರೋಪಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಗಾಂವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಅನಿಲ್ ಕುಮಾರ ಮೇಲೆ ಮರಣಾಂತಿಕ ಹಲ್ಲೆ ನಡೆದಿರುವುದರಿಂದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here