ಸುರಪುರ: ಗೃಹ ರಕ್ಷಕ ದಳ ಕಚೇರಿಯಲ್ಲಿ ೭೪ನೇ ಸ್ವಾತಂತ್ರ್ಯ ದಿನಾಚರಣೆ

0
89

ಸುರಪುರ: ನಗರದ ಗೃಹ ರಕ್ಷಕ ದಳ ಕಚೇರಿ ಮತ್ತು ತಹಸೀಲ್ ರಸ್ತೆಯಲ್ಲಿನ ಶರಣಬಸವ ಕೆಂಗುರಿ ಪುತ್ಥಳಿ ಆವರಣದಲ್ಲಿ ಗೃಹ ರಕ್ಷಕ ದಳದಿಂದ ೭೪ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಗೃಹ ರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಕಲ್ ಧ್ವಜಾರೋಹಣ ನೆರವೇರಿಸಿದರು.

ನಂತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರ್ತುಜಾ ಖಾದರ್ ಅವರಿಗೆ ಪ್ಲಾಟೂನ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಿ ಪದವಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಯಲ್ಲಪ್ಪ ಹುಲಕಲ್ ಮಾತನಾಡಿ,ನಮ್ಮ ದೇಶ ಸ್ವಾತಂತ್ರವಾಗಲು ಅನೇಕ ಜನ ಮಹನಿಯರ ತ್ಯಾಗ ಬಲಿದಾನದಿಂದ ನಾವೆಲ್ಲ ಸ್ವಾತಂತ್ರ್ಯರಾಗಿದ್ದೇವೆ.ಇದನ್ನು ನಾವು ಎಂದೂ ಮರೆಯಬಾರದು ಎಂದರು.ಅದೇರೀತಿಯಾಗಿ ಇಂದು ನಮ್ಮ ಗೃಹ ರಕ್ಷಕ ದಳದ ಮುರ್ತುಜಾ ಖಾದರ್ ಚಿಗರಿಹಾಳ ಅವರು ಪ್ಲಾಟೂನ್ ಕಮಾಂಡರ್ ಆಗಿ ಬಡ್ತಿ ಹೊಂದಿರುವುದು ಸಂತೋಷದ ಸಂಗತಿಯಾಗಿದೆ ಅದರಲ್ಲೂ ಇಂದು ಇಂತಹ ಅವಿಸ್ಮರಣಿಯ ದಿನದಂದು ಪದವಿ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.ಇನ್ನಮೇಲೆ ಮುರ್ತುಜಾ ಅವರ ಮೇಲೆ ಜವಬ್ದಾರಿ ಹೆಚ್ಚಿದೆ,ಕೆಂಭಾವಿ ಘಟಕವನ್ನು ಜಿಲ್ಲೆಯಲ್ಲಿಯೆ ಮಾದರಿ ಘಟಕವನ್ನಾಗಿ ಮಾಡುವಂತೆ ಕೊರಿ ಶುಭ ಹಾರೈಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಅಧಿಕಾರಿ ವೆಂಕಟೇಶ ಸುರಪುರ ರಮೇಶ ಅಂಬುರೆ ಮಾಜಿ ಗೃಹ ರಕ್ಷಕ ಅಧಿಕಾರಿ ಮಹೇಂದ್ರನಾಥ ಅಂಗಡಿ ಹಾಗು ಪದವಿ ಸ್ವೀಕರಿಸಿದ ಮುರ್ತುಜಾ ವೇದಿಕೆಯಲ್ಲಿದ್ದು ಮಾತನಾಡಿದರು.

ಮಲ್ಲಿಕಾರ್ಜುನ ಗುಡಗುಂಟಿ ಕೊಟ್ರಯ್ಯಸ್ವಾಮಿ ಬಸಣ್ಣ ಲಕ್ಷ್ಮೀಪುರ ಬಸಪ್ಪ ಬಿಜಾಸಪುರ ಅಮರಪ್ಪ ಅನಿಲಕುಮಾರ ಸೂರ್ಯಕಾಂತ ಪರಶುರಾಮ ಪೂಜಾರಿ ಆದಪ್ಪ ಕೆಂಗುರಿ ಸುರೇಶ ಗೋನಾಲ ಸುರೇಶ ಕವಡಿಮಟ್ಟಿ ಶರಣಪ್ಪ ಯಾದಗಿರಿ ಅಲ್ಲಾವುದ್ದೀನ್ ಕಾಶಿನಾಥ ಸೇರಿದಂತೆ ಅನೇಕರಿದ್ದರು.ಭೀಮರಾಯ ಹುಲಿಕಲ್ ಸ್ವಾಗತಿಸಿದರು,ಬುಡ್ಡಪ್ಪ ಚವಲ್ಕರ್ ನಿರೂಪಿಸಿದರು,ಬೀಮುಲು ರಾಠೋಡ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here