ಕಲಬುರಗಿ: ನಗರದ ರಾಣೇಶ ಪೀರ್ ದರ್ಗಾದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂ ಪ್ರಭು ಪಾಟೀಲ್ ಅವರು ಕೊರೊನಾದಿಂದ ಗುಣಮುಖವಾಗಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಅಮಿತ ಉದನೂರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾಮನಾಳಕರ್ ನೇತೃತ್ವದಲ್ಲಿ ಚಾದರ್ ಹೊದಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ಯುವ ಮುಖಂಡರಾದ ಶಿವರಾಯ ಕಣ್ಗೆ, ಉದಯಕುಮಾರ ಕಣ್ಗೆ, ಪ್ರಹ್ಲಾದ ಕುಂಕುಮಕರ್, ಶಿವರಾಜ ಭಂಡಾರಿ, ಸೈಬಣ್ಣ ಗಡೆಸೂರು, ರಾಜೇಶ ಕೊರೆ, ಶಶಿ ಉದನೂರ, ಸಾಗರ ಸಾವುರ, ಪ್ರಶಾಂತ ಡಾಂಗೆ, ಶಶಿಕುಮಾರ, ಗೌತಮ ಭಂಡಾರಿ, ಸತೀಶ ಕುಂಕುಮಕರ್ ಇದ್ದರು.