ಸುರಪುರ: ಇಂದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿರುವ ಡ್ರಗ್ಸ್ ದಂಧೆ ಇಡೀ ಮನುಕುಲವನ್ನೆ ನಾಶ ಮಾಡುವಂತಹದ್ದಾಗಿದೆ ಎಂದು ಎಬಿವಿಪಿ ವಿಭಾಗಿಯ ಸಹ ಪ್ರಮುಖ ಡಾ: ಉಪೇಂದ್ರ ನಾಯಕ ಸುಬೇದಾರ್ ಮಾತನಾಡಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ವಿರುಧ್ಧ ಸಹಿ ಸಂಗ್ರಹ ಚಳವಳಿಯ ನೇತೃತ್ವ ವಹಿಸಿ ಮಾತನಾಡಿ,ಡ್ರಗ್ಸ್ ಗಾಂಜಾದಿಂದ ಲಕ್ಷಾಂತರ ಜನರ ಬದುಕು ನಾಶ ಮಾಡಿದೆ.ಅಲ್ಲದೆ ವಿದ್ಯಾರ್ಥಿಗಳು ಕೂಡ ಡ್ರಗ್ಸ್ ದಾಸರಾಗಿರುವುದು ತುಂಬಾ ಅಪಾಯಕಾರಿ ಸಂಗತಿಯಾಗಿದೆ.ಕೂಡಲೆ ಈ ದಂಧೆಯ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ರಾಜ್ಯದಲ್ಲಿನ ಎಲ್ಲಾ ಕಾಲೇಜುಗಳಲ್ಲಿ ಇಂತಹ ಚಟುವಟಿಕೆಗಳು ನಡೆಯದಂತೆ ಕಠಿಣ ಕಾನೂನು ಜಾರಿಗೊಳಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಈ ದಂಧೆಯಲ್ಲಿ ತೊಡಗಿದವರನ್ನು ಬಂಧಿಸಬೇಕು ಮತ್ತು ಇವರ ಮೇಲೆ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು ಐದು ನೂರಕ್ಕೂ ಹೆಚ್ಚು ಜನರು ಸಹಿ ಮಾಡುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು.ಚಳವಳಿಯಲ್ಲಿ ಗಂಗಾಧರ ನಾಯಕ ನಾಗರಾಜ ಮಕಾಶಿ ಕ್ಯಾತಪ್ಪ ಮೇದಾ ರಾಜು ಪುಲ್ಸೆ ಮಲ್ಲೇಶಿ ಪಾಟೀಲ ಪರಶುರಾಮ ಧರ್ಮರಾಯ ಭೀಮು ಬಸವರಾಜ ನಡಕೂರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.