ಸುರಪುರ: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರಾವಾಹಿಗೆ ತಾಲೂಕಿನ ಗೋನಾಲ ಎಸ್.ಡಿ ಗ್ರಾಮದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಲಾಗಿದೆ.
ಗೋನಾಲ ಎಸ್.ಡಿ ಗ್ರಾಮದಲ್ಲಿನ ಅಂಬೇಡ್ಕರರವರ ಅಭಿಮಾನಿಗಳು ಬೃಹತ್ ಪ್ರಮಾಣದ ಮಹಾನಾಯಕ ಧಾರಾವಾಗಿಯ ಬ್ಯಾನರ್ ಹಾಕಿ ಸಂಭ್ರಮಾಚರಣೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮದ ಮಂಜುನಾಥ ದೊಡ್ಮನಿ ಮಲ್ಲಿಕಾರ್ಜುನ ರಾಜು ಸಂತೋಷ ವಿನೋದ ದೊಡ್ಮನಿ ಸೇರಿದಂತೆ ಅನೇಕರಿದ್ದರು.