ಕಲಬುರಗಿ: ಜಾತಿರಹಿತ ಸಮಾಜ ನಿರ್ಮಾಣ ಹಾಗೂ ಸಮಾಜದಲ್ಲಿ ಮಾನವೀಯ ಮೌಲ್ಯ ಬಿತ್ತುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚುವೆ ಸತೀಶ ಜಾರಕಿ ಹೊಳಿ ಸಮಾಜದಲ್ಲಿ ವೈಚಾರಿಕ ಬೀಜ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಘಟಕ ಆಯೋಜಿಸಿದ್ದ ಸಚಿವ ಸತೀಶ ಜಾರಕಿಹೊಳಿ ಅವರ 57ನೇ ಹುಟ್ಟು ಹಬ್ಬದ ನಿಮಿತ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೌಢ್ಯ ವಿರೋಧಿ ರಾಜಕಾರಣಿ ಎಂದು ಬಣ್ಣಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ ಮುಖ್ಯ ಅತಿಥಿಯಾಗಿದ್ದರು.
ಸಚಿವರ 57ನೇ ಹುಟ್ಟು ಹಬ್ಬದ ನಿಮಿತ್ತ ವೇದಿಕೆಯ ತಾಲ್ಲೂಕು ಅಧ್ಯಕ್ಷ ದಿನೇಶ ದೊಡ್ಡಮನಿ ನಿಮಿತ್ತ 57 ಜನರಿಗೆ ಸಸಿ ವಿತರಿಸಿದರು.
ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಮಲ್ಲಪ್ಪ ಹೊಸಮನಿ, ಶಿಕ್ಷಕ ರಾಜಶೇಖರ ಮಾಂಗ್, ಸಂತೋಷ ಸಿಂಧೆ, ವೀರ ನಾಯಕ, ವಕೀಲ ನಾಗರಾಜ ಜವಳಿ, ಸಾಮಾಜಿಕ ಸಂಘಟಕ ಸಂತೋಷ ಮೇಲ್ಮನಿ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಪದಾಧಿಕಾರಿಗಳು, ಜಾರಕಿಹೊಳಿ ಅಭಿಮಾನಿಗಳು ಇತರರು ಭಾಗವಹಿಸಿದ್ದರು.